Monday, May 6, 2024
spot_imgspot_img
spot_imgspot_img

ಬೆಳ್ತಂಗಡಿ: ಅಕ್ರಮ ಮರಳು ಸಾಗಾಟ; ಆರೋಪಿ ಪೊಲೀಸ್ ವಶ..!

- Advertisement -G L Acharya panikkar
- Advertisement -

ಬೆಳ್ತಂಗಡಿ: ಅಕ್ರಮವಾಗಿ ಮರಳು ಕಳ್ಳತನ ಮಾಡಿ ಟಿಪ್ಪರ್ ನಲ್ಲಿ ಸಾಗಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆದು ಟಿಪ್ಪರ್ ಲಾರಿಯನ್ನು, ಮರಳಿನೊಂದಿಗೆ ಮುಂದಿನ ಕಾನೂನುಕ್ರಮಕ್ಕಾಗಿ ಸ್ವಾಧೀನಪಡಿಸಿದ ಘಟನೆ ಬೆಳ್ತಂಗಡಿ ತಾಲೂಕು ಕೊಕ್ರಾಡಿ ಗ್ರಾಮದ ಕಜಂಗೆ ದೇವದ ಗುಂಡಿ ಹೊಳೆಯ ಬಳಿ ನಡೆದಿದೆ.

ಆರೋಪಿಯನ್ನು ಕೊಕ್ರಾಡಿ ಗ್ರಾಮ ಬೆಳ್ತಂಗಡಿ ನಿವಾಸಿ ಧನಕೀರ್ತೀ (50) ಎಂದು ಗುರುತಿಸಲಾಗಿದೆ.

ಬೆಳ್ತಂಗಡಿ ತಾಲೂಕು ಕೊಕ್ರಾಡಿ ಗ್ರಾಮದ ಕಜಂಗೆ ದೇವದ ಗುಂಡಿ ಹೊಳೆಯ ಬಳಿ ರಾತ್ರಿ ವೇಳೆ ಅಕ್ರಮವಾಗಿ ಮರಳು ಕಳ್ಳತನ ಮಾಡಿ ತನ್ನ ಬಾಬ್ತು ಕೆಎ 70-4468 ನೇ ಮಿನಿ ಟಿಪ್ಪರ್ ನಲ್ಲಿ ಸಾಗಾಟ ಮಾಡಲು ಯತ್ನಿಸುತ್ತಿದ್ದ, ಆರೋಪಿಯನ್ನು ವಶಕ್ಕೆ ಪಡೆದ ಶ್ರೀಶೈಲ್‌ ಡಿ ಮುರಗೋಡ್‌ ಪಿಎಸ್‌ಐ (ಕಾ.ಸು) ವೇಣೂರು ಪೊಲೀಸ್ ಠಾಣೆರವರು ಹಾಗೂ ಠಾಣಾ ಸಿಬ್ಬಂದಿಗಳು, ಸ್ಥಳದಲ್ಲಿ ಅನಧಿಕೃತವಾಗಿ ಹೊಳೆಯಿಂದ ಮರಳನ್ನು ಕಳವು ಮಾಡಿ ಸುಮಾರು 1 ಯೂನಿಟ್ ನಷ್ಟು ಮರಳನ್ನು ತುಂಬಿಸಿದ್ದ ಟಿಪ್ಪರ್ ಲಾರಿಯನ್ನು, ಮರಳಿನೊಂದಿಗೆ ಮುಂದಿನ ಕಾನೂನುಕ್ರಮಕ್ಕಾಗಿ ಸ್ವಾಧೀನಪಡಿಸಿ, ವೇಣೂರು ಪೊಲೀಸ್ ಠಾಣೆಯಲ್ಲಿ ಅಕ್ರ 15/2024 ಕಲಂ 379 IPC ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!