’ಅಗಾಗ ನೋಟಿಸ್ ಜಾರಿ ಮಾಡಿ ಸ್ವಯಂ ಸೇವಕರನ್ನು ಕ್ರಿಮಿನಲ್ ರೀತಿ ನೋಡುವುದು ಒಳ್ಳೆಯದಲ್ಲ- ವಜ್ರದೇಹಿ ಸ್ವಾಮಿ


ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಹಿಂದೂ ಸ್ವಯಂ ಸೇವಕರ ಮೇಲೆ ಪೊಲೀಸ್ ಇಲಾಖೆ ನೋಟಿಸ್ ಜಾರಿ ಮಾಡಿದೆ. ಈ ಬಗ್ಗೆ ವಜ್ರದೇಹಿ ಸ್ವಾಮೀಜಿ ಅಕ್ರೋಶ ವ್ಯಕ್ತಪಡಿಸಿದ್ದಾರೆ.
“ಅಕ್ಷಯ್ ರಜಪೂತ್ ಮತ್ತು ನರಸಿಂಹ ಮಾಣಿ ಎಂಬವರ ಹೆಸರಿನಲ್ಲಿ ಈಗಾಗಲೇ ನೋಟಿಸ್ ಜಾರಿ ಮಾಡಿದ್ದಾರೆ. ಸಮಾಜವನ್ನು ಜಾಗೃತಿಗೊಳಿಸುವಂತ ಯುವಕರ ಮೇಲೆ ನಾನಾ ರೀತಿಯ ಮೊಕದ್ದಮೆಗಳನ್ನು ಹಾಕಿ ಅವರನ್ನು ಕೈಕಟ್ಟಿ ಹಾಕುವಂತಹ ಅಥವಾ ಅವರನ್ನು ಧಮಯಿಸುವಂತ ಪ್ರಕ್ರಿಯೆಯನ್ನು ನೀವುಗಳು ಇಂದೇ ಬಿಟ್ಟರೆ ಒಳ್ಳೆಯದು.
ಇಂತಹ ವಿಚಾರಗಳಿಗೆ ಯಾರೋ ಒಬ್ಬ ಲೀಡರ್ ಇದರ ಬಗ್ಗೆ ಕುಮ್ಮಕ್ಕು ಕೊಡುವುದು. ನಾನಾ ರೀತಿಯಲ್ಲಿ ಅವರನ್ನು ಅವಹೇಳನ ಮಾಡುವುದು, ಅಗಾಗ ನೋಟಿಸ್ ಜಾರಿ ಮಾಡಿ ಅವರನ್ನು ಕ್ರಿಮಿನಲ್ ರೀತಿ ನೋಡುವುದು ಒಳ್ಳೆಯದಲ್ಲ. ಹಾಗಾಗಿ ಸರ್ಕಾರವನ್ನು ಅಗ್ರಹ ಮಾಡುತ್ತೇವೆ ಇಂತಹ ಹಿಂದೂ ಸ್ವಯಂ ಸೇವಕರನ್ನು, ಹಿಂದೂ ಕಾರ್ಯಕರ್ತರನ್ನು ಧಮನಿಸುವ ಈ ಪ್ರಕ್ರಿಯೆಗಳು ಸರ್ಕಾರಕ್ಕೆ, ಪೊಲೀಸ್ ಇಲಾಖೆಗೆ ಇದು ಕೆಟ್ಟ ಹೆಸರನ್ನು ತರುತ್ತೆ.
ಕ್ರೈಂ ಕಡಿಮೆ ಮಾಡಬೇಕು ಅನ್ನೋ ದೃಷ್ಟಿಯಿಂದ ಕಾನೂನು ಇರೋದು, ಇಲಾಖೆಗಳು ಇರೋದು, ಕ್ರೈಂ ಹೆಚ್ಚಾಗುತ್ತಾ ಹೋಗಬಾರದು. ನೀವು ಅದಕ್ಕೆ ಎಡೆ ಕೊಟ್ಟರೆ ಇನ್ನು ಮುಂದೆ ಸಮಾಜ ಏನು ಮಾಡಬೇಕು? ಹಾಗಾಗಿ ಪೊಲೀಸ್ ಇಲಾಖೆ ಇದರಿಂದ ಎಚ್ಚೆತ್ತುಕೊಳ್ಳಬೇಕು. ಇವತ್ತಿನ ಸನ್ನಿವೇಶದಲ್ಲಿ ಗಾಂಜಾ ನಶೆ ಅಥವಾ ಅಮಲಿನ ನಶೆ ಇದೆಲ್ಲವೂ ಸಮಾಜವನ್ನು ಹಾಳು ಮಾಡುತ್ತಾ ಇದೆ. ಆ ದೃಷ್ಟಿಯಿಂದ ಕಾರ್ಯಚರಣೆ ಆದರೆ ಒಳ್ಳೆಯದು ಎಂದು ನಾವು ಭಾವಿಸುತ್ತೇವೆ. ಇನ್ನು ಹಿಂದೂ ಸಮಾಜದ ಯುವಕರನ್ನು ಪದೇ ಪದೇ ಠಾಣೆಗೆ ಕರಿಸೋದು, ಅವರ ಕೈಯಿಂದ ಪತ್ರ ಮಾಡುವುದು ಇವೆಲ್ಲಾ ಕಾನೂನಿನ ವ್ಯವಸ್ಥೆಯಾದರೂ ಕೂಡ ಹಿಂಸಿಸುವುದು ಸಮಾಜಕ್ಕೆ ಒಳ್ಳೆಯದಲ್ಲ. ಒಂದಲ್ಲ ಒಂದು ದಿನ ಹಿಂದೂ ಸಮಾಜ ತಿರುಗಿ ಬೀಳಬಹುದು ಆಗ ತುಂಬಾ ಕಷ್ಟ ಅಂತನಿಸಬಹುದು. ಯಾಕೆಂದರೆ ಪದೇ ಪದೇ ನೋವು ಕೊಡುವುದು ಯಾರಿಗೂ ಓಳ್ಳೆದಾಗುದಲ್ಲ. ಹಾಗಿರುವಾಗ ಕಾರ್ಯಕರ್ತರು, ಸ್ವಯಂ ಸೇವಕರು ಸಮಾಜದ ಏಳಿಗೆಗಾಗಿ ದುಡಿಯುತ್ತಾರೆ, ಸಮಾಜದ ಒಳ್ಳೆಯದಕ್ಕಾಇ ದುಡಿಯುತ್ತಾರೆ, ಸಮಾಜದ ವ್ಯವಸ್ಥೆಗಾಗಿ ದುಡಿಯುತ್ತಾರೆ. ಅದು ಗೋ ಹತ್ಯೆ ವಿಷಯವಾಗಿರಬಹುದು, ಲವ್ ಜಿಹಾದ್ ವಿಷಯವಾಗಿರಬಹುದು ಎಲ್ಲಾ ವಿಷಯಗಳಲ್ಲಿ ಅವರು ತಮ್ಮ ದೇಹವನ್ನು ಮುಡಿಪಾಗಿಟ್ಟು, ಯಾವುದೇ ಮರಣದ ಅಂಜಿಕೆ ಇಲ್ಲದೆ ಕರ್ತವ್ಯವನ್ನು ಮಾಡುತ್ತಾರೆ. ಹಾಗಿರುವುದರಿಂದ ಈ ಎಲ್ಲಾ ವಿಷಯಗಳಲ್ಲಿ ಜಿಲ್ಲಾಡಾಳಿತ ಮತ್ತು ಸರಕಾರ ಯಾವುದೇ ರೀತಿಯಲ್ಲಿ ಕುಮ್ಮಕ್ಕಿಗೆ ಪ್ರಚೋದನೆ ಕೊಡದೆ ಸಮಾಜವನ್ನು ಶಾಂತಿಯುತವಾಗಿ ಸಡೆಸುವಲ್ಲಿ ಕಾರಣವಾಗಬೇಕೆಂದು ಈ ಮೂಲಕ ಜಿಲ್ಲಾಡಾಳಿತ ಮತ್ತು ಸರಕಾರಕ್ಕೆ ಆಗ್ರಹ ಮಾಡುತ್ತೇನೆ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.