ಬೆಂಗಳೂರು: ಕೊರೋನಾ ಸೋಂಕಿನ ಭೀತಿಯ ನಡುವೆ ರಾಜ್ಯದಲ್ಲಿ ಶಾಲಾ-ಕಾಲೇಜು ಆರಂಭಕ್ಕೆ ಸರ್ಕಾರಕ್ಕೆ ಡಾ.ದೇವಿಪ್ರಸಾದ್ ಶೆಟ್ಟಿ ಸಮಿತಿಯು ಮಧ್ಯಂತರ ವರದಿಯಲ್ಲಿ ತಿಳಿಸಿದ್ದು, ಈ ಬಗ್ಗೆ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಲಸಿಕೆ ನೀಡಿದ ನಂತರ ಶಾಲಾ-ಕಾಲೇಜು ಆರಂಭಕ್ಕೆ ಸೂಚಿಸಿದೆ.
ಶಾಲೆಗಳ ಆರಂಭದ ಬಗ್ಗೆ ತಿಳಿಸಿಲ್ಲ. ಕಾಲೇಜುಗಳನ್ನು ಹಂತ ಹಂತವಾಗಿ ಆರಂಭಿಸುವಂತೆ ತಜ್ಞರು ಸಲಹೆ ಮಾಡಿರೋದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ಈ ಮೂಲಕ ಸದ್ಯಕ್ಕೆ 1 ರಿಂದ 10 ನೇ ತರಗತಿ ಶಾಲೆಗಳು ಆರಂಭವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಡಾ.ದೇವಿ ಪ್ರಸಾದ್ ಶೆಟ್ಟಿ ಸಮಿತಿಯು ನೀಡಿದಂತ ತಜ್ಞರ ಸಮಿತಿಯ ಮಧ್ಯಂತರ ವರದಿಯ ಕುರಿತಂತೆ ಮಾತನಾಡಿದಂತ ಸಿಎಂ ಯಡಿಯೂರಪ್ಪ, ಮೊದಲ ಹಂತದಲ್ಲಿ ಕಾಲೇಜುಗಳ ಆರಂಭಕ್ಕೆ ಸೂಚಿಸಿದೆ. ಕೊರೋನಾ ಲಸಿಕೆ ನೀಡಿದ ನಂತರವೇ ಕಾಲೇಜು ಆರಂಭಕ್ಕೆ ಸಲಹೆ ಮಾಡಿರೋದಾಗಿ ಹೇಳಿದರು.
ಮುಂದುವರೆದು ಮಾತನಾಡಿದಂತ ಅವರು, ಹಂತ ಹಂತವಾಗಿ ಶಾಲಾ-ಕಾಲೇಜು ಆರಂಭಕ್ಕೆ ಸೂಚಿಸಿದೆ. ಮೊದಲು ಕಾಲೇಜು ಆರಂಭಿಸಬೇಕು ಎಂದಿದೆ. ನಂತರ ಹಂತ ಹಂತವಾಗಿ ಶಾಲೆಗಳ ಆರಂಭಕ್ಕೆ ಸಲಹೆ ಮಾಡಿದೆ. ಬರುವಂತ ದಿನಗಳಲ್ಲಿ ಶಾಲಾ ಕಾಲೇಜು ಆರಂಭ ಮಾಡುವ ಕುರಿತಂತೆ ಚರ್ಚೆ ನಡೆಸಲಾಗುತ್ತದೆ ಎಂದರು.