Thursday, May 9, 2024
spot_imgspot_img
spot_imgspot_img

ಲೋ ಬಿಪಿಯಿಂದ ಮರದಿಂದ ಬಿದ್ದು ಪೊಲೀಸ್ ಸಿಬ್ಬಂದಿ ಸಾವು

- Advertisement -G L Acharya panikkar
- Advertisement -

ಲೋ ಬಿಪಿಯಿಂದ ಮರದಿಂದ ಬಿದ್ದು ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ ಘಟನೆ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ನಡೆದಿದೆ.

ಮೃತ ಪೊಲೀಸ್ ಸಿಬ್ಬಂದಿಯನ್ನು ಲೋಕೇಶ್ (40) ಎಂದು ಗುರುತಿಸಲಾಗಿದೆ. ಇವರು ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರ ಗನ್ ಮ್ಯಾನ್ ಆಗಿದ್ದು, 15 ವರ್ಷಗಳಿಗೂ ಹೆಚ್ಚು ಕಾಲ ಅವರ ಬಳಿ ಕೆಲಸ ಮಾಡಿದ್ದರು.

ಜನರಿಗೆ ಚಿರಪರಿಚಿತರಾಗಿದ್ದ ಲೋಕೇಶ್ ಕಾನ್ ಬೈಲ್ ಗ್ರಾಮದ ತೋಟದಲ್ಲಿ ಮರದ ಕೆಲಸ ಮಾಡುವ ವೇಳೆ ಲೋ ಬಿಪಿಯಾಗಿ ಮರದಿಂದ ಬಿದ್ದು ಮೃತಪಟ್ಟಿದ್ದಾರೆ. ಭಾನುವಾರ ಆಗಿದ್ದ ಕಾರಣ ಮನೆಯಲ್ಲೇ ಇದ್ದ ಲೋಕೇಶ್ ಮನೆಯ ಸಮೀಪದಲ್ಲಿದ್ದ ತೋಟಕ್ಕೆ ತೆರಳಿ ಮಾವಿನ ಮರದ ಮೇಲೆ ಹತ್ತಿ ಮರಕ್ಕೆ ಕಸಿ ಮಾಡಲು ಸುಮಾರು 40 ಅಡಿ ಎತ್ತರಕ್ಕೆ ಏರಿದ್ದರು. ಮರದ ತುದಿಗೆ ಹತ್ತಿದ್ದ ಸಂದರ್ಭ ಬಿಪಿ ಲೋ ಆಗಿದೆ.

ಈ ವೇಳೆ ತಮ್ಮೊಂದಿಗಿದ್ದ ಸಹೋದರನ ಬಳಿ ಶುಗರ್ ಲೆವೆಲ್ ಡೌನ್ ಆಗುತ್ತಿದೆ. ಮನೆಗೆ ಹೋಗಿ ಸ್ವಲ್ಪ ಸಕ್ಕರೆ ತರುವಂತೆ ಸೂಚಿಸಿದ್ದಾರೆ. ಸಹೋದರ ಮನೆಗೆ ತೆರಳಿ ಸಕ್ಕರೆ ತರುವ ಹೊತ್ತಿಗೆ ಲೋಕೇಶ್ ಮರದಿಂದ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಇವರ ಕೈ ಮತ್ತು ಕಾಲಿನ ಮೂಳೆ ಮುರಿದಿದೆ. ತಕ್ಷಣವೇ ಇವರನ್ನು ಮಡಿಕೇರಿ ಆಸ್ಪತ್ರೆಗೆ ರವಾನಿಸಿದರೂ ಮಾರ್ಗಮಧ್ಯೆ ಲೋಕೇಶ್ ಕೊನೆಯಿಸಿರೆಳೆದಿದ್ದಾರೆ. ಇವರ ಪಾರ್ಥಿವ ಶರೀರವನ್ನು ಮಡಿಕೇರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

Insta: glacharyajewellers
Fb: glacharya

- Advertisement -

Related news

error: Content is protected !!