- Advertisement -
- Advertisement -



ವಿಟ್ಲ : ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಮೈರ ಕೇಪುವಿನ ಶ್ರೀ ದುರ್ಗಾ ಮಿತ್ರ ಸೇವಾ ಸಮಿತಿ, ಮೈರ ಇದರ ವತಿಯಿಂದ ” ಶ್ರೀ ಸತ್ಯನಾರಾಯಣ ಪೂಜೆ” 08-03-2025ನೇ ಶನಿವಾರ ಸಂಜೆ ಶ್ರೀ ದುರ್ಗಾ ಮಿತ್ರ ವೃಂದದ ರಂಗಮಂದಿರದಲ್ಲಿ ಬಹಳ ವಿಜೃಂಭಣೆಯಿಂದ ನೆರವೇರಿತು.ಎಸ್ . ಬಾಲಕೃಷ್ಣ ಕಾರಂತ ಎರುಂಬು ಇವರ ಪೌರೋಹಿತ್ಯದಲ್ಲಿ “ಶ್ರೀ ಸತ್ಯನಾರಾಯಣ ಪೂಜೆ”ಯು ದುರ್ಗಾ ಮಿತ್ರ ವೃಂದದ ಸದಸ್ಯರ ಪೂರ್ಣ ಸಹಕಾರದಲ್ಲಿ, ಊರಿನ ಮತ್ತು ಪರ ಊರ ಭಕ್ತಾದಿಗಳು, ಹಾಗೂ ಸರ್ವ ಧರ್ಮೀಯರ ನೆರವಿನಿಂದ ನಡೆಯಿತು.


ಸಮಿತಿಯ ಅದ್ಯಕ್ಷರ,ಮತ್ತು ಸರ್ವ ಸದಸ್ಯರ ಮುತುವರ್ಜಿಯಿಂದ ಬಹಳ ವಿಜೃಂಭಣೆಯಿಂದ ನೆರವೇರಿತು.ಸತ್ಯನಾರಾಯಣ ಪೂಜೆಯಲ್ಲಿ ಶ್ರೀ ದುರ್ಗಾ ಮಿತ್ರ ಸೇವಾ ಸಮಿತಿಯ ಅಧ್ಯಕ್ಷ ಜನಾರ್ದನ ಕುಲಾಲ್ & ರಮಣಿ ದಂಪತಿಗಳು ಸಮಿತಿಯ ಸದಸ್ಯರ ಪರವಾಗಿ ಪೂಜೆಯನ್ನು ನೆರವೇರಿಸಿದರು.
- Advertisement -








