Sunday, May 5, 2024
spot_imgspot_img
spot_imgspot_img

ಬಂಟ್ವಾಳ: (ಜ.25, 26) ಕೊಡಾಜೆ ಮಜ್ಲಿಸುನ್ನೂ‌ರ್ ಹಾಗೂ ಸ್ವಲಾತ್ ವಾರ್ಷಿಕ ಪ್ರಯುಕ್ತ ಧಾರ್ಮಿಕ ಪ್ರವಚನ

- Advertisement -G L Acharya panikkar
- Advertisement -

ಬಂಟ್ವಾಳ : ಕೊಡಾಜೆ ಬದ್ರಿಯಾ ಜುಮಾ ಮಸೀದಿ, ಹಾಗೂ ತರ್ಬಿಯತುಲ್ ಇಸ್ಲಾಂ ಮದರಸ ಹಿರಿಯವಿದ್ಯಾರ್ಥಿ ಸಂಘಟನೆ ಇದರ ವತಿಯಿಂದ ಮಜ್ಲಿಸುನ್ನೂ‌ರ್ ಹಾಗೂ ಸ್ವಲಾತ್ ವಾರ್ಷಿಕ ಪ್ರಯುಕ್ತ 2 ದಿನಗಳ ಧಾರ್ಮಿಕ ಪ್ರವಚನ ಕಾರ್ಯಕ್ರಮವು ಜ.25 ಮತ್ತು 26 ರಂದು ಕೊಡಾಜೆ ಮಸೀದಿ ವಠಾರದಲ್ಲಿ ನಡೆಯಲಿದೆ.

ಜ. 25 ರಂದು ಮಗ್ರಿಬ್ ನಮಾಜಿನ ಬಳಿಕ ಸ್ವಲಾತ್ ವಾರ್ಷಿಕ ನಡೆಯಲಿದ್ದು ಮಸೀದಿ ಗೌರವಾಧ್ಯಕ್ಷ ಕೆ.ಎಸ್.ಅಲಿ ತಂಙಳ್ ಕುಂಬೋಳ್ ಉದ್ಘಾಟಿಸುವರು. ಕಕ್ಕಿಂಜೆ ಜುಮಾ ಮಸೀದಿ ಖತೀಬ್ ಅಬೂಬಕ್ಕರ್ ಸಿದ್ದೀಕ್ ಅಹ್ಮದ್ ಜಲಾಲಿ ಧಾರ್ಮಿಕ ಪ್ರವಚನ ನೀಡಲಿದ್ದಾರೆ. ಜ. 26 ರಂದು ಮಜ್ಲಿಸುನ್ನೂರು ನಡೆಯಲಿದ್ದು, ಎನ್.ಪಿ.ಎಂ. ಪಝಲ್ ಕೋಯಮ್ಮ ತಂಙಳ್ ಕುನ್ನುಂಗೈ ದುವಾಶೀರ್ವಚನ ಗೈಯಲಿದ್ದಾರೆ. ಕೊಡಾಜೆ ಬಿ.ಜೆ.ಎಂ. ಖತೀಬ್ ಕೆ.ಎಂ. ಅಬ್ದುಲ್ ಅಝೀಝ್ ದಾರಿಮಿ ಪೊನ್ಮಲೆ ಮುಖ್ಯ ಭಾಷಣಗೈಯಲಿದ್ದು, ಮಸೀದಿ ಅಧ್ಯಕ್ಷ ಹಾಜಿ ಇಬ್ರಾಹಿಂ ರಾಜ್‌ ಕಮಲ್ ಅದ್ಯಕ್ಷತೆ ವಹಿಸುವರು.

ಮುಖ್ಯ ಅತಿಥಿಗಳಾಗಿ ಟಿ.ಎ. ಝಕರಿಯಾ ಅಸ್ಲಮಿ ಮರ್ದಾಳ, ಹಾಜಿ ಮುಹಮ್ಮದ್ ರಫೀಕ್ ಸುಲ್ತಾನ್, ನವಾಜ್ ನೇರಳಕಟ್ಟೆ, ಹಾಜಿ ಉಮ್ಮ‌ರ್ ರಾಜ್ ಕಮಲ್, ಹಾಜಿ ಮುಹಮ್ಮದ್ ಅಶ್ರಫ್ ಕೆ, ಹಾಜಿ ಫಾರೂಕ್ ಸುಲ್ತಾನ್ ಭಾಗವಹಿಸಲಿದ್ದಾರೆ ಎಂದು ತರ್ಬಿಯತುಲ್ ಇಸ್ಲಾಂ ಮದರಸ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಂಝ ನೆಡ್ಯಾಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!