Monday, June 30, 2025
spot_imgspot_img
spot_imgspot_img

ಬೆಳ್ಳಾರೆ; ಬಿಜೆಪಿ ಕಾರ್ಯಕರ್ತನ ಹತ್ಯೆ ಪ್ರಕರಣ; ಇಬ್ಬರು ಅರೆಸ್ಟ್‌..! ಹಂತಕರ ಜಾಡು ಹಿಡಿದ ಖಾಕಿ ಪಡೆ

- Advertisement -
- Advertisement -

ಬೆಳ್ಳಾರೆ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ರಾಜ್ಯವನ್ನೇ ತಲ್ಲಣಗೊಳಿಸಿದೆ. ಕಾರ್ಯಕರ್ತನ ಹತ್ಯೆಗೆ ಭೀಕರ ವಿರೋಧ ವ್ಯಕ್ತವಾಗಿತ್ತು. ಸಿಟ್ಟು ನೆತ್ತಿಗೇರಿದ ಕಾರ್ಯಕರ್ತರು ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಂತೆಯೇ ಪೊಲೀಸ್ ಇಲಾಖೆಗೆ ತೀವ್ರ ಒತ್ತಡವೂ ಇತ್ತು. ಪೊಲೀಸರು 5 ವಿಶೇಷ ತಂಡಗಳನ್ನು ರಚಿಸಿದ್ದಾರೆ.

ಬೆಳ್ಳಾರೆ ಮೂಲದ ಝಾಕಿರ್ ಸವಣೂರು (29) ಮತ್ತು ಮಹಮ್ಮದ್ ಶಾಫೀಕ್ (27) ಎಂಬವರನ್ನು ಕೇರಳದ ಕಾಸರಗೋಡಿನಲ್ಲಿ ಬಂಧಿಸಿದ್ದಾಗಿ ಎಸ್‌ಪಿ ಋಷಿಕೇಶ್ ಸೋನಾವಣೆ ತಿಳಿಸಿದ್ದಾರೆ. ೧೫ ಮಂದಿ ಶಂಕಿತರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಕೃತ್ಯಕ್ಕೆ ಕೇರಳ ರಿಜಿಸ್ಟಾರ್‍ ವಾಹನವನ್ನು ಬಳಸಿದ್ದಾರೆ. ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

- Advertisement -

Related news

error: Content is protected !!