Monday, May 20, 2024
spot_imgspot_img
spot_imgspot_img

ಪ್ರಮುಖ ಆರೋಪಿ ಮುಸ್ತಫಾ ಪೈಚಾರ್ ಬಂಧನಕ್ಕೆ ಪ್ರವೀಣ್ ಪತ್ನಿ ನೂತನಾ ಸಂತಸ : ದೇಶದಲ್ಲಿಯೇ ಪ್ರವೀಣ್ ನೆಟ್ಟಾರು ಹತ್ಯೆ ಅಂತಿಮ ಪ್ರಕರಣವಾಗಬೇಕು : ನೂತನ ನೆಟ್ಟಾರ್‌

- Advertisement -G L Acharya panikkar
- Advertisement -
This image has an empty alt attribute; its file name is VC_PUC_-1-819x1024.jpg

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ನಾಲ್ಕನೇ ಆರೋಪಿಯಾಗಿರುವ ಮುಸ್ತಫಾ ಪೈಚಾರ್ ಬಂಧಿಸಿರುವ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ನೂತನ ನೆಟ್ಟಾರು ರವರು ನನ್ನ ಪತಿಯ ಹತ್ಯೆ ನಡೆದು ಎರಡು ವರ್ಷ ಆಯಿತು ಆದರೂ, NIA ಯವರು ಈ ಪ್ರಕರಣದ ಆರೋಪಿಗಳನ್ನು ಹಿಡಿಯಲು ತುಂಬಾನೇ ಪ್ರಯತ್ನ ಪಡುತ್ತಿರುವುದು ನಮಗೆ ತಿಳಿದಿದೆ.

ಮುಸ್ತಫಾ ಪೈಚಾರ್ ಎನ್ನುವವನು ಈ ಪ್ರಕರಣದ ಪ್ರಮುಖ ಆರೋಪಿ ಅವನ ಬಂಧನವಾಗಿರುವುದು ನಮಗೆ ತುಂಬಾ ಸಂತೋಷದ ವಿಷಯ ಹಾಗೂ ಇವನ ಹಿಂದೆ ಇನ್ನೂ ಎಷ್ಟು ಮಂದಿ ಆರೋಪಿಗಳಿದ್ದಾರೋ ಅವರೆಲ್ಲರ ಬಂಧನ ಆಗಬಹುದೆಂಬ ಭರವಸೆ ಹಾಗೂ ನಂಬಿಕೆ NIA ಮೇಲೆ ಇದೆ. ಆರೋಪಿಗಳಿಗೆ ಆಗುವ ಶಿಕ್ಷೆ ಹೇಗಿರಬೇಕು ಎಂದರೆ, ಇನ್ನೆಂದೂ ಸಮಾಜದಲ್ಲಿ ಯಾರೂ ಯಾವತ್ತೂ ಇಂತಹ ಕೃತ್ಯ ಎಸಗಲು ಹೋಗಬಾರದು ಅಂತಹ ಶಿಕ್ಷೆವಿಧಿಸಬೇಕು ಅಂದರೆ ಈ ಪ್ರಕರಣದಲ್ಲಿರುವ ಎಲ್ಲರೂ ಆರೋಪಿಗಳಿಗೆ ಮರಣದಂಡನೆ ಆಗಬೇಕು ಎಂಬುದು ನಮ್ಮೆಲ್ಲರ ಅಭಿಪ್ರಾಯ.

ಇನ್ನೆಂದೂ ನಮ್ಮ ದೇಶದಲ್ಲಿ ಇಂತಹ ಪ್ರಕರಣ ನಡೆಯಬಾರದು ಪ್ರವೀಣ್ ನೆಟ್ಟಾರು ಹತ್ಯೆ ಅಂತಿಮ ಪ್ರಕರಣವಾಗಬೇಕು.ಇಡೀ ದೇಶದಲ್ಲಿ ಇಂತಹ ಪ್ರಕರಣಗಳು ಮತ್ತೆ ನಡೆಯಬಾರದು. ನಮ್ಮ ಕುಟುಂಬದ ಪರವಾಗಿ ಎನ್​ಐಎ ಅಧಿಕಾರಿಗಳಿಗೆ ಧನ್ಯವಾದ ಹೇಳುತ್ತೇನೆ. ಬಂಧನ ಆಗಿರುವುದು ನಮಗೆಲ್ಲ ತುಂಬಾ ಖುಷಿಯಾಗಿದೆ ಎಂದರು.

- Advertisement -

Related news

error: Content is protected !!