- Advertisement -
- Advertisement -
ಬೆಂಗಳೂರು(ನ.14): ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಊರುಗಳಿಗೆ ಪಟಾಕಿ ಕೊಂಡೊಯ್ಯುವ ಸಾಧ್ಯತೆಗಳಿರುವುದರಿಂದ ಆರ್ಟಿಒ ಅಧಿಕಾರಿಗಳ ತಂಡ ನಗರದ ವಿವಿಧೆಡೆ ಖಾಸಗಿ ವಾಹನಗಳನ್ನು ಪರಿಶೀಲನೆ ನಡೆಸುತ್ತಿದೆ.
ಸಾರಿಗೆ ಆಯುಕ್ತ ನರೇಂದ್ರ ಹೊಲಕ್ಕರ್ ಹಾಗೂ ಜಂಟಿ ಸಾರಿಗೆ ಆಯುಕ್ತ ಕೆಟಿ ಹಾಲಸ್ವಾಮಿ ಅವರ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ರೇಸ್ ಕೋರ್ಸ್, ಸಿಲ್ಕ್ ಬೋರ್ಡ್, ಮೆಜೆಸ್ಟಿಕ್, ನೆಲಮಂಗಲ, ಕೆ.ಆರ್ ಪುರ , ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ನಗರಾದ್ಯಂತ ನಾಲ್ವರು ಆರ್ಟಿಒ ಅಧಿಕಾರಿಗಳ ನೇತೃತ್ವದಲ್ಲಿ 15 ತಂಡ ಪರಿಶೀಲನೆ ನಡೆಸುತ್ತಿದೆ.
ರೇಸ್ಕೋರ್ಸ್ನಲ್ಲಿ ಪರಿಶೀಲನೆ ನಡೆಸುವ ವೇಳೆ ಆಂಧ್ರಪ್ರದೇಶಕ್ಕೆ ತೆರಳುತ್ತಿದ್ದ ಖಾಸಗಿ ಬಸ್ವೊಂದ್ರಲ್ಲಿ ಪಟಾಕಿ ಬಾಕ್ಸ್ ಇರುವುದು ಪತ್ತೆಯಾಗಿದೆ.
- Advertisement -