- Advertisement -
- Advertisement -
ಬೇರ ಸಿನಿಮಾದ ನಿರ್ಮಾಪಕ, ಎಸ್ಎಲ್ವಿ ಬುಕ್ ಹೌಸ್ನ ಮಾಲಕರಾದ ದಿವಾಕರ್ ದಾಸ್ ನೇರ್ಲಾಜೆಯವರು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಎಸ್.ಎಲ್.ವಿ ಕಲರ್ಸ್ ಲಾಂಛನದಲ್ಲಿ ಮೂಡಿಬಂದ ಎಸ್ಎಲ್ವಿ ಬುಕ್ ಹೌಸ್ನ ಮಾಲಕರಾದ ಉದ್ಯಮಿ ದಿವಾಕರ್ ದಾಸ್ ನೇರ್ಲಾಜೆ ನಿರ್ಮಾಣದ, ವಿನು ಬಳಂಜ ನಿರ್ದೇಶನದ ವಿಭಿನ್ನ ಕಥಾ ಹಂದರವನ್ನೊಳಗೊಂಡ ಬೇರ ಸಿನಿಮಾ ಜೂನ್ 16 ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದ್ದು, ಈ ಸಿನಿಮಾ ಯಶಸ್ವಿ ಪ್ರದರ್ಶನದೊಂದಿಗೆ ಜಯಭೇರಿಯಾಗಲಿ ಎಂದು ಶ್ರೀ ದೇವರಿಗಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಕೃಷ್ಣಯ್ಯ ವಿಟ್ಲ ಅರಮನೆ, ರಾಜರಾಮ ಶೆಟ್ಟಿ ಕೋಲ್ಪೆಗುತ್ತು, ಜಯರಾಮ ಬಲ್ಲಾಳ್, ರವಿ ಪ್ರಕಾಶ್ ವಿಟ್ಲ, ಮೋಹನ್ ಕಟ್ಟೆ, ಚುಕ್ಕಿತಾರೆ ಕಲಾವಿದ ಸೂರ್ಯ ಆಚಾರ್ಯ, ಹರೀಶ್ ಸಿ ಹೆಚ್ ಉಪಸ್ಥಿತರಿದ್ದರು.
- Advertisement -