




ಲಯನ್ಸ್ ಕ್ಲಬ್ ವಿಟ್ಲ ಸಿಟಿ ವತಿಯಿಂದ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಕಡಂಬು ಇದರ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.
ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಬಿಎಮ್ ಹಸೈನಾರ್, ಲಯನ್ಸ್ ನ ಜಿಲ್ಲಾ ಸಂಪರ್ಕ ಅಧಿಕಾರಿ ವಿ.ಎನ್ ಸುದರ್ಶನ್ ಪಡಿಯಾರ್, ವಲಯ ಅಧ್ಯಕ್ಷ ವಸಂತ ಶೆಟ್ಟಿ ಎರ್ಮಿನಿಲೆ,ಲಯನ್ಸ್ ಕ್ಲಬ್ ವಿಟ್ಲ ಸಿಟಿಯ ಅಧ್ಯಕ್ಷ ಶ್ವೇತ ರವಿಕುಮಾರ್, ವಿಟ್ಲ ಪಡ್ನೂರು ಗ್ರಾಮದ ಪಂಚಾಯತಿ ಸದಸ್ಯ ಹಾಗೂ ಲಯನ್ಸ್ ಕ್ಲಬ್ ವಿಟ್ಲ ಸಿಟಿಯ ಮಾಜಿ ಅಧ್ಯಕ್ಷರು ಪ್ರಸ್ತುತ ಕ್ಲಬ್ಬಿನ ಖಜಾಂಜಿಯಾಗಿರುವ ಸಂದೇಶ್ ಶೆಟ್ಟಿ ಬಿಕ್ನಾಜೆ , ಕ್ಲಬ್ ನ ಕಾರ್ಯದರ್ಶಿ ದಿನಕರ ಆಳ್ವ ಹಾಗೂ ಕ್ಲಬ್ಬಿನ ಸದಸ್ಯರಾದ ಶ್ರೀ ಒ.ಎ ಕೃಷ್ಣ, ಧರ್ಣಪ್ಪ ಗೌಡ, ಚಂದ್ರಹಾಸ ಗೌಡ ಶ್ರೀ ವಿ.ಶೀನಾ ಕಾಶಿ ಮಠ, ಪಂಚಾಯತ್ ಸದಸ್ಯ ಶ್ರೀಮತಿ ನೆಬಿಸ, ಶಾಲಾ ಮುಖ್ಯೋಪಾಧ್ಯಾಯ ರಾಮಚಂದ್ರನಾಯ್ಕ. ಬಿ, ಸಹ ಶಿಕ್ಷಕರಾದ ಶೋಭಾಲತಾ , ರಶ್ಮಿ. ಟಿ ಶಾಲಾ ಮಕ್ಕಳು ಹಾಗೂ ಹೆತ್ತವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಇಂಜಿನಿಯರಿಂಗ್ ನಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದ ಕುಮಾರಿ ಸುಚಿತಾ ಇವರನ್ನು ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು








