- Advertisement -
- Advertisement -
ವಿಟ್ಲ: ಪುಗರ್ತೆ ಕಲಾವಿದರು ವಿಟ್ಲ (ಮೈರ, ಕೇಪು )ನಾಟಕ ತಂಡದ ಈ ವರ್ಷದ ಹೊಸ ಕಲಾ ಕಾಣಿಕೆ ನಿತಿನ್ ಹೊಸಂಗಡಿ ವಿರಚಿತ ರಾಜಶೇಖರ ಶೆಟ್ಟಿ ಕುಡ್ತಮುಗೇರು ನಿರ್ದೇಶನದ “ಆಯೆ ಬುಡಯೆ” ನಾಟಕದ ಶುಭ ಮುಹೂರ್ತವು ದಿ.14/1/2021 ರಂದು ಕೇಪು ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಶ್ರೀ ದುರ್ಗಾ ಮಿತ್ರ ವೃಂದದ ಅಧ್ಯಕ್ಷರಾದ ಶೀನ ನಾಯ್ಕ ಕಲ್ಲಾಪು, ಪದಾಧಿಕಾರಿಗಳಾದ ಪುರುಷೋತ್ತಮ ಮೈರ, ಜಗಜ್ಜೀವನ್ ರಾಮ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ ಬೇಂಗ್ರೋಡಿ, ಪುರುಷೋತ್ತಮ ಗೌಡ ಕಲ್ಲಂಗಳ.
ನಾಟಕ ತಂಡದ ಅಧ್ಯಕ್ಷರಾದ ಪದ್ಮನಾಭ ಕಲ್ಲಂಗಳ ನಾಟಕ ರಚನೆಕಾರ ನಿತಿನ್ ಹೊಸಂಗಡಿ, ನಾಟಕ ನಿರ್ದೇಶಕ ರಾಜಶೇಖರ ಶೆಟ್ಟಿ ಕುಡ್ತಮುಗೇರು, ಸಂಗೀತ ನಿರ್ದೇಶಕ ರವಿ ಸುಂಕದಕಟ್ಟೆ, ನಾಟಕ ತಂಡದ ಪದಾಧಿಕಾರಿಗಳು , ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮ ವನ್ನು ನಾಟಕ ತಂಡದ ಸದಸ್ಯ ವಿಜಯ್ ಕಾನತ್ತಡ್ಕ ನಿರೂಪಿಸಿದರು.
- Advertisement -