- Advertisement -
- Advertisement -
ಪುಣಚ: ತೋಟಗಾರಿಕೆ ಇಲಾಖೆ ಜಿಲ್ಲಾ ಪಂಚಾಯತ್ ದಕ್ಷಿಣ ಕನ್ನಡ ಬಂಟ್ವಾಳ ತಾಲೂಕು ಉಜ್ವಲ ಸಂಜೀವಿನಿ ಸ್ವ ಸಹಾಯ ಸಂಘಗಳ ಒಕ್ಕೂಟ ಪುಣಚ ಮತ್ತು ಗ್ರಾಮಪಂಚಾಯತ್ ಪುಣಚ ಇದರ ವತಿಯಿಂದ ಒಂದು ದಿನದ ಜೇನು ತರಬೇತಿ ಕಾರ್ಯಕ್ರಮವನ್ನು ಪುಣಚ ಗ್ರಾಮ ಪಂಚಾಯತ್ ಆವರಣದಲ್ಲಿ ನಡೆಯಿತು.
ನಾಡಗೀತೆ ಯೊಂದಿಗೆ ಕಾರ್ಯಕ್ರಮ ಆರಂಭಿಸಿ ದೀಪ ಬೆಳಗಿಸಿ ಉದ್ಘಾಟಿಸಿದರು. ಇಲಾಖಾ ಅಧಿಕಾರಿ ಪ್ರದೀಪ್ ಡಿಸೋಜ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಂಚಾಯತ್ ಅಧ್ಯಕ್ಷರ ಪ್ರೋತ್ಸಾಹದೊಂದಿಗೆ ಜೇನು ಕೃಷಿಯ ಬಗ್ಗೆ ಅನುಭವಿ ತರಬೇತುದಾರ ರಾಧಾ ಕೃಷ್ಣ ಇವರಿಂದ ಜೇನು ಕೃಷಿಯಿಂದ ಮನುಷ್ಯನಿಗೆ ಮತ್ತು ಪರಿಸರಕ್ಕೆ ಆಗುವ ಪ್ರಯೋಜನವನ್ನು ಬಹಳ ಉತ್ಸಹದಿಂದ ವಿವರಿಸಿದರೆ ನೇರ ತರಬೇತಿಯನ್ನು ಜೇನು ಪೆಟ್ಟಿಗೆ ಮತ್ತು ಜೇನು ಕುಟುಂಬ ಮಾರಾಟಗಾರರದ ಕೇಪು ಸುಧಾಕರ್ ಅವರ ಮನೆಯ ಸುತ್ತಮುತ್ತಲಿನ ಜೇನು ಕುಟುಂಬದೊಂದಿಗೆ ವಿವರಿಸಿದರು.
- Advertisement -