Friday, May 3, 2024
spot_imgspot_img
spot_imgspot_img

ಪುಂಜಾಲಕಟ್ಟೆ: ಕಟ್ಟಡದ ಮೇಲ್ಬಾವಣಿಯಿಂದ ಬಿದ್ದು ವ್ಯಕ್ತಿ ಮೃತ್ಯು..!

- Advertisement -G L Acharya panikkar
- Advertisement -

ಪುಂಜಾಲಕಟ್ಟೆ: ಹಳೆಯ ಕಟ್ಟಡದ ಮೇಲ್ಬಾವಣಿ ಕೆಡಹುವ ಸಂದರ್ಭದಲ್ಲಿ ಕೆಳಗೆ ಬಿದ್ದು ಕಂಬಳ ಕೋಣಗಳ ಯಜಮಾನ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಬಡಗಕಜೆಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ತೆಂಕಕಜೆಕಾರು ಎಂಬಲ್ಲಿ ನಡೆದಿದೆ.

ಮೃತಪಟ್ಟ ವ್ಯಕ್ತಿ ಬಡಗಕಜೆಕಾರು ಗ್ರಾಮದ ಕುಲೆಂಜಿಕೋಡಿ ನಿವಾಸಿ ಸುಂದರ ಪೂಜಾರಿ (55) ಎಂದು ಗುರುತಿಸಲಾಗಿದೆ.

ಮೇಸ್ತ್ರಿ ಕೆಲಸ ಮಾಡುತ್ತಿದ್ದಇವರು ತೆಂಕಕಜೆಕಾರಿನ ವಿಜಯಾ ಅವರ ದೈವಸ್ಥಾನದ ಕಟ್ಟಡ ಕೆಡಹುವ ಕೆಲಸಕ್ಕೆ ಹೋಗಿದ್ದು, ಗೋಡೆಯ ಮೇಲಿನಿಂದ ಸ್ಲ್ಯಾಬ್‌ ತೆಗೆಯುವ ವೇಳೆ ಸ್ಲ್ಯಾಬ್‌ ಸಹಿತ ಕೆಳಕ್ಕೆ ಬಿದ್ದಿದ್ದರು. ಗಂಭೀರ ಗಾಯಗೊಂಡ ಅವರನ್ನು ತಕ್ಷಣ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತು, ಅದಾಗಲೆ ಅವರು ಮೃತಪಟ್ಟಿದ್ದರು. ಘಟನೆ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಂದರ ಪೂಜಾರಿ ಅವರು ಕಳೆದ 6 ವರ್ಷಗಳಿಂದ ಕಂಬಳ ಕೋಣಗಳ ಯಜಮಾನರಾಗಿದ್ದು, ಅವರ ಓಟದ ಕೋಣಗಳು ಹಲವಾರು ಪ್ರಶಸ್ತಿ ಪಡೆದಿದ್ದವು.

- Advertisement -

Related news

error: Content is protected !!