Friday, June 27, 2025
spot_imgspot_img
spot_imgspot_img

ಅಯೋಧ್ಯ ರಾಮಮಂದಿರದ ವಿಟ್ಲಮೂಡ್ನೂರು ಹಾಗೂ ಕುಳ-ಕುಂಡಡ್ಕ ಗ್ರಾಮಕ್ಕೆ ಸಂಬಂಧಿಸಿದ ಮಂತ್ರಾಕ್ಷತೆ ವಿತರಣೆ ‘ಪುರ ಪ್ರವೇಶ’ ಕಾರ್ಯಕ್ರಮ

- Advertisement -
- Advertisement -

ಬೃಹತ್ ವಾಹನ ಜಾಥದ ಮೂಲಕ ಸಾಗಿ ಬಂದ ಭವ್ಯ ಮೆರವಣಿಗೆ

ವಿಟ್ಲ: ಅಯೋಧ್ಯ ರಾಮಮಂದಿರದ ವಿಟ್ಲಮೂಡ್ನೂರು ಹಾಗೂ ಕುಳ- ಕುಂಡಡ್ಕ ಗ್ರಾಮಕ್ಕೆ ಸಂಬಂಧಿಸಿದ ಮಂತ್ರಾಕ್ಷತೆ ವಿತರಣೆ ‘ಪುರ ಪ್ರವೇಶ’ ಕಾರ್ಯಕ್ರಮ ನಡೆಯಿತು.

ಬೆಳಿಗ್ಗೆ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಿಂದ ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಬೃಹತ್ ವಾಹನ ಜಾಥದ ಮೂಲಕ ಭವ್ಯ ಮೆರವಣಿಗೆ ಸಾಗಿ ಬಂತು.

ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಮಾತೆಯರು ಕಲಶ ಹಿಡಿದು ಚೆಂಡೆಯ ಮೂಲಕ ಅದ್ದೂರಿಯಾಗಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ರವೀಂದ್ರ ಪುತ್ತೂರು, ಸಾಮರಸ್ಯ ಸಂಯೋಜಕ್ ಮಂಗಳೂರು ವಿಭಾಗ ಇವರು ‘ಪುರ ಪ್ರವೇಶ’ ಕಾರ್ಯಕ್ರಮ ದ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸುಮಾರು 500 ಕ್ಕೂ ಅಧಿಕ ಹಿಂದೂ ಬಾಂಧವರು ಭಾಗವಹಿಸಿದರು.

- Advertisement -

Related news

error: Content is protected !!