


ಪುರಿ ಜಗನ್ನಾಥ ರಥಯಾತ್ರೆ ಸಂದರ್ಭ ಕಾಲ್ತುಳಿತದಂತಹ ಸನ್ನಿವೇಶ ಸೃಷ್ಟಿಯಾಗಿದ್ದು, 500ಕ್ಕೂ ಅಧಿಕ ಭಕ್ತರು ಅಸ್ವಸ್ಥಗೊಂಡು ಬವಳಿ ಬಂದು ಬಿದ್ದಿದ್ದಾರೆ. ಕನಿಷ್ಠ 300 ಭಕ್ತರು ಗಂಭೀರವಾಗಿ ಗಾಯಗೊಂಡಿದ್ದಾರೆಂದು ನ್ಯೂಸ್ 18 ಸುದ್ದಿ ಜಾಲತಣ ವರದಿ ಮಾಡಿದೆ.
ಇದು ವಾರ್ಷಿಕ ರಥಯಾತ್ರೆ ಸಂದರ್ಭದಲ್ಲಿ ಜನಜಂಗುಳಿ ನಿಯಂತ್ರಣದ ಬಗ್ಗೆ ಮತ್ತೊಮ್ಮೆ ಕಳವಳಗಳನ್ನು ಸೃಷ್ಟಿಸಿದೆ. 3ಗಜಪತಿ ದೊರೆಯ ಅರಮನೆ ಶ್ರೀ ನಹರ್ ಬಳಿ ಜಗನ್ನಾಥ ದೇವರ ‘ಪಹರಿ’ ವಿಧಿ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಊಹಿಸಲೂ ಸಾಧ್ಯವಿಲ್ಲದಷ್ಟು ಭಾರೀ ಸಂಖ್ಯೆಯಲ್ಲಿ ಭಕ್ತಾದಿಗಳು ಈ ಸಂದರ್ಭದಲ್ಲಿ ಸೇರಿದ್ದರು.ಸುಮಾರು 2.5 ಕಿ.ಮೀ.ದೂರದ ಗುಂಡಿಚಾ ದೇವಸ್ಥಾನಕ್ಕೆ ಬಲಭದ್ರನ ರಥ ‘ತಲಧ್ವಜ’ವನ್ನು ಎಳೆಯುತ್ತಿದ್ದಾಗ ಹಗ್ಗವನ್ನು ಸ್ಪರ್ಶಿಸಲು ಮುಗಿಬಿದ್ದ ಭಕ್ತರು ಅದನ್ನು ಎಳೆಯಲು ಪ್ರಯತ್ನಿಸುತ್ತಿದ್ದಂತೆ ಕಾಲ್ತುಳಿತದಂತಹ ಸನ್ನಿವೇಶ ಉಂಟಾಗಿತ್ತು.173 ಗಾಯಾಳುಗಳನ್ನು ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, 68 ಜನರು ಹೊರರೋಗಿಗಳಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಗಂಭೀರ ಸ್ಥಿತಿಯಲ್ಲಿರುವ ಕನಿಷ್ಠ ಎಂಟು ಭಕ್ತರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.