- Advertisement -
- Advertisement -
ಪುತ್ತೂರು: ವ್ಯಕ್ತಿಯೋರ್ವರಿಗೆ ಅವಾಚ್ಯ ಶಬ್ದಗಳಿಂದ ಬೈದು ,ದೈಹಿಕ ಹಲ್ಲೆ ಯತ್ನ ನಡೆಸಿ ಹಾಗೂ ಕೊಲೆ ಬೆದರಿಕೆ ಒಡ್ಡಿದ ಘಟನೆ ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಕಿಲ್ಲೆ ಮೈದಾನದ ಬಳಿಯಿರುವ ಕ್ಯಾಂಟೀನ್ ನಲ್ಲಿ ನಡೆದಿದೆ.
ಆರೋಪಿಗಳನ್ನು ಮಂಜುನಾಥ ಮತ್ತು ಪ್ರಶಾಂತ ಯಾನೆ ಪಚ್ಚು ಎಂದು ಗುರತಿಸಲಾಗಿದೆ.
ಆರ್ಯಾಪು ಗ್ರಾಮ ,ಪುತ್ತೂರು ತಾಲೂಕು ಮೇರ್ಲ ಮನೆ ನಿವಾಸಿ ಪಿ ಕೇಶವ ಸುವರ್ಣ (67) ಮಧ್ಯಾಹ್ನ ಸಮಯದಲ್ಲಿ ಕಸಬಾ ಗ್ರಾಮದ ಕಿಲ್ಲೆ ಮೈದಾನದ ಬಳಿಯಿರುವ ಕ್ಯಾಂಟೀನ್ ನಲ್ಲಿ ಊಟ ಮಾಡುತ್ತಿದ್ದ ವೇಳೆ ಆರೋಪಿಗಳು ಅವಾಚ್ಯ ಶಬ್ದಗಳಿಂದ ಬೈದು , ದೈಹಿಕ ಹಲ್ಲೆ ಯತ್ನ ನಡೆಸಿ ಹಾಗೂ ಕೊಲೆ ಬೆದರಿಕೆ ಒಡ್ಡಿ ಆರೋಪಿಗಳು ಪರಾರಿಯಾಗಿರುತ್ತಾರೆ. ಅಲ್ಲದೇ ಈ ಮೊದಲು ಅವರಿಗೆ ಆರೋಪಿ ಮಂಜುನಾಥ ಕರೆ ಮಾಡಿ ಕೊಲೆ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.
- Advertisement -