- Advertisement -
- Advertisement -
ಪುತ್ತೂರು: ನಗರ ಠಾಣಾ ಪಿಎಸ್ಐ ಆಗಿ ಆಂಜನೇಯ ರೆಡ್ಡಿರವರನ್ನು ನೇಮಕ ಮಾಡಲಾಗಿದೆ.
ಪಿಎಸ್ಐ ಆಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀಕಾಂತ್ ರಾಥೋಡ್ ವರ್ಗಾವಣೆ ಆಗಿದ್ದು, ಅವರಿದ್ದ ಜಾಗಕ್ಕೆ ಆಂಜನೇಯ ರೆಡ್ಡಿರವರನ್ನು ನೇಮಕ ಮಾಡಿ ಆದೇಶಿಸಲಾಗಿದೆ.
ಆಂಜನೇಯ ರೆಡ್ಡಿ ಅವರು ಬೆಳ್ಳಾರ ಪೊಲೀಸ್ ಠಾಣೆಯಲ್ಲಿ ಪ್ರೊಬೆಷನರಿ ಎಸ್ಐ ಆಗಿದ್ದು, ಬಳಿಕ ಎಸ್ ಆಗಿದ್ದ ಡಿ.ಎನ್.ಈರಯ್ಯ ಅವರ ವರ್ಗಾವಣೆಯ ಬಳಿಕ ಅದೇ ಠಾಣೆಗೆ ಎಸ್ ಆಗಿ ಆಂಜನೇಯ ರೆಡ್ಡಿ ನಿಯುಕ್ತಿಯಾಗಿದ್ದರು. ಬಳಿಕ ಅವರಿಗೆ ಕಡಬ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿತ್ತು. ಕಡಬದಲ್ಲಿದ್ದ ರುಕ್ಕ ನಾಯ್ಕ ಅವರು ಬೆಳ್ಳಾರೆ ಠಾಣೆಗೆ ವರ್ಗಾವಣೆಯಾದರು. ಇದೀಗ ಆಂಜನೇಯ ರೆಡ್ಡಿ ಅವರು ಕಡಬ ಠಾಣೆಯಿಂದ ಪುತ್ತೂರು ನಗರ ಠಾಣೆಗೆ ವರ್ಗಾವಣೆಯಾಗಿದ್ದಾರೆ.
- Advertisement -