- Advertisement -
- Advertisement -
ಪುತ್ತೂರು: ಕುಮಾರಧಾರ ನದಿಗೆ ಮೀನು ಹಿಡಿಯಲು ಹೋದ ಮೂವರಲ್ಲಿ ಒಬ್ಬರು ನಾಪತ್ತೆಯಾದ ಘಟನೆ ಶಾಂತಿಗೋಡಿನಲ್ಲಿ ನಡೆದಿದೆ.
ಮುಂಡೂರು ಗ್ರಾಮದ ಕಡ್ಯ ತೌಡಿಂಜ ನಿವಾಸಿ ಕಾಂತರ ಎಂಬವರು ಕಣ್ಮರೆಯಾಗಿದ್ದು, ಕಾಂತರ ಹಾಗೂ ಅವರ ಪುತ್ರ ಮತ್ತು ಅಳಿಯ ಶಾಂತಿಗೋಡು ಕುಮಾಧಾರ ಹೊಳೆಯಲ್ಲಿ ಗಾಳ ಹಾಕಿ ಮೀನು ಹಿಡಿಯಲು ಹೋಗಿದ್ದರು.
ಮೀನಿಗೆ ಗಾಳ ಹಾಕುತ್ತಿದ್ದ ಕಾಂತರ ಆಕಸ್ಮಿಕವಾಗಿ ಹೊಳೆಗೆ ಬಿದ್ದು ಕಣ್ಮರೆಯಾಗಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದವರು ಮತ್ತು ಪೊಲೀಸರು ತೆರಳಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
- Advertisement -