Sunday, June 29, 2025
spot_imgspot_img
spot_imgspot_img

ಪುತ್ತೂರು: ಶಿವಂ ಜನಸೇವಾ ಕೇಂದ್ರ ಉದ್ಘಾಟನೆ

- Advertisement -
- Advertisement -

ಅಂಗವಿಕಲರಿಗೆ ಹಾಗೂ ವಿಧವೆಯವರಿಗೆ ಉಚಿತ ಪಾಸ್ ಸೇವೆ -ಶಾಂತಾರಾಮ್ ವಿಟ್ಲ

ಪುತ್ತೂರು: ಶಿವಂ ಜನಸೇವಾ ಕೇಂದ್ರ ಪುತ್ತೂರಿನ ಭವಾನಿ ಶಂಕರ ರಸ್ತೆಯ ಚೇತನಾ ಆಸ್ಪತ್ರೆಯ ಮುಂಭಾಗದ ಕಟ್ಟಡದಲ್ಲಿ ಶುಭಾರಂಭಗೊಂಡಿತು.

ಶಾಂತಾರಾಮ್ ವಿಟ್ಲ ಮಾಲಕತ್ವದ ಶಿವಂ ಜನಸೇವಾ ಕೇಂದ್ರವನ್ನು ಮಾಡಾವು ವಿಶ್ವನಾಥ ರೈ ಅಧ್ಯಕ್ಷರು, ಕೆ ಎಸ್ ಆರ್ ಟಿ ಸಿ ಮಜ್ದೂರು ಸಂಘ ಪುತ್ತೂರು ಘಟಕ ಇವರು ರಿಬ್ಬನ್ ಕತ್ತರಿಸಿ ಅತಿಥಿಗಳು ದೀಪ ಬೆಳಗಿಸಿ ನೂತನ ಕಚೇರಿ ಉದ್ಘಾಟಿಸಿದರು. ಬಳಿಕ ಕಚೇರಿಯ ಕಂಪ್ಯೂಟರ್ ಸೇವೆಗೆ ವಿದ್ಯುಕ್ತ ಚಾಲನೆ ನೀಡಲಾಯಿತು.

ಮಾಡಾವು ವಿಶ್ವನಾಥ ರೈ ಅಧ್ಯಕ್ಷರು, ಕೆ ಎಸ್ ಆರ್ ಟಿ ಸಿ ಮಜ್ದೂರು ಸಂಘ ಪುತ್ತೂರು ಘಟಕ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಜಯಕರ ಶೆಟ್ಟಿ ವಿಭಾಗ ನಿಯಂತ್ರಣಾಧಿಕಾರಿ ಕೆ ಎಸ್ ಆರ್ ಟಿ ಸಿ ಪುತ್ತೂರು, ಸಂಶುದ್ದೀನ್ ಸಂಪ್ಯ ಕೋಶಾಧಿಕಾರಿ ಕಾರ್ಯನಿರತ ಪತ್ರಕರ್ತರ ಸಂಘ ಪುತ್ತೂರು, ಶರುಣ್ ಪಿಂಟೋ, ಮ್ಯಾನೇಜರ್ ಏಮ್ ಸಿ ಸಿ ಬ್ಯಾಂಕ್, ರಾಮ್ ದಾಸ್ ಶೆಟ್ಟಿ ವಿಟ್ಲ, ಅಧ್ಯಕ್ಷರು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ಉಪಸ್ಥಿತರಿದ್ದು ಶಿವಂ ಜನಸೇವಾ ಕೇಂದ್ರ ಕಚೇರಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶಿವಂ ಜನಸೇವಾ ಕೇಂದ್ರ ಕಚೇರಿಗೆ ಸಹಕಾರ ನೀಡಿದ ರಾಜೀವ ವಿಟ್ಲ ರವರನ್ನು ಗೌರವಿಸಲಾಯಿತು.

ಅತಿಥಿಗಳನ್ನು ಪ್ರಮೀಳಾ ಶಾಂತಾರಾಮ್ ಶೆಟ್ಟಿ ಸ್ವಾಗತಿಸಿ ಸಂಸ್ಥೆಯ ಮುಖ್ಯಸ್ಥರಾದ ಶಾಂತಾರಾಮ್ ವಿಟ್ಲ ಧನ್ಯವಾದ ನೀಡಿ ಶಿವಂ ಜನಸೇವಾ ಕೇಂದ್ರದಲ್ಲಿ ಅಂಗವಿಕಲರಿಗೆ ಹಾಗೂ ವಿಧವೆಯವರಿಗೆ ಪಾಸ್ ಸೇವೆಗಳನ್ನು ಉಚಿತವಾಗಿ ಮಾಡಿ ಕೊಡಲಾಗುವುದು ಎಂದು ತಿಳಿಸಿದರು.

- Advertisement -

Related news

error: Content is protected !!