Monday, June 30, 2025
spot_imgspot_img
spot_imgspot_img

ಪುತ್ತೂರು: (ಮೇ 23) ಡಾ.ಪಿ.ಬಿ ರೈ ಪ್ರತಿಷ್ಠಾನ ಕೆಯ್ಯೂರು ಮತ್ತು ಪವಿತ್ರ ವಿವಾ ಎಂಟರ್‌ ಪ್ರೈಸಸ್‌-ನೆಲ್ಯಾಡಿ ಜಂಟಿ ಆಶ್ರಯದಲ್ಲಿ ಕೃಷಿ ಮಾಹಿತಿ ಕಾರ್ಯಗಾರ- ಜಗದಂಬಾ ಎಂಟರ್‌ಪ್ರೈಸಸ್‌ ಸಂಸ್ಥೆಯ ಅನಾವರಣ

- Advertisement -
- Advertisement -

ಡಾ.ಪಿ.ಬಿ ರೈ ಪ್ರತಿಷ್ಠಾನ ಕೆಯ್ಯೂರು ಮತ್ತು ಪವಿತ್ರ ವಿವಾ ಎಂಟರ್‌ ಪ್ರೈಸಸ್‌-ನೆಲ್ಯಾಡಿ ಇವರ ಜಂಟಿ ಆಶ್ರಯದಲ್ಲಿ ವಿವಾ ಕಿಸಾನ್‌ ಕಿಂಗ್‌ ಸಾವಯವ ಗೊಬ್ಬರ ಹಾಗೂ ಸಾವಯವ ಕೃಷಿ ಮಾಹಿತಿ ಕಾರ್ಯಗಾರ ಮತ್ತು ಜಗದಂಬಾ ಎಂಟರ್‌ಪ್ರೈಸಸ್‌ ಸಂಸ್ಥೆಯ ಅನಾವರಣ ಕಾರ್ಯಕ್ರಮ ಮೇ 23 ರಂದು ಸುಂದರ್‌ ರಾಮ್‌ ಶೆಟ್ಟಿ ಸಭಾಭವನ (ಬಂಟರ ಭವನ) ದಲ್ಲಿ ನಡೆಯಲಿದೆ.

ಡಾ.ಪಿ ಬಿ ರೈ ಪ್ರತಿಷ್ಠಾನದ ಅಧ್ಯಕ್ಷ ಸಹಕಾರ ರತ್ನ ದಂಬೆಕಾನ ಸದಾಶಿವ ರೈ, ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಕೆ. ಸೀತಾರಾಮ ರೈ ಸವಣೂರು ಸಂಚಾಲಕರು ವಿದ್ಯಾ ಸಮೂಹ ಸಂಸ್ಥೆ ಸವಣೂರು, ಸೇಡಿಯಾಪು ಜನಾರ್ಧನ ಭಟ್‌ ಕೃಷಿಕರು ಪುತ್ತೂರು, ಡಾ. ಶಿವಾನಂದ ಆಡಳಿತ ನಿರ್ದೇಶಕರು ಸುದ್ದಿ ಸಮೂಹ ಸಂಸ್ಥೆ, ರಾಧಕೃಷ್ಣ ಬೋರ್ಕರ್‌ ಮಾಜಿ ತಾಲೂಕು ಪಂಚಾಯತ್‌ ಅಧ್ಯಕ್ಷರು, ಗುಂಡ್ಯಡ್ಕ ವಾಸು ಪೂಜಾರಿ ಕೃಷಿಕರು ಅರಿಯಡ್ಕ ಇವರುಗಳು ಉದ್ಘಾಟಿಸಲಿದ್ದಾರೆ.

ಡಾ.ಪಿ ಬಿ ರೈ ಪ್ರತಿಷ್ಠಾನದ ಗೌರವಾಧ್ಯಕ್ಷ ಹೇಮನಾಥ ಶೆಟ್ಟಿ ಕಾವು ಇವರು ಪ್ರಸ್ತಾವಿಕ ಮಾತುಗಳನ್ನಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಶಶಿಕುಮಾರ್‌ ರೈ ಬಾಲ್ಯೊಟ್ಟು, ಬೂಡಿಯಾರ್‌ ರಾಧಕೃಷ್ಣ ರೈ, ದಯಾನಂದ ರೈ ಮನವಳಿಕೆ, ಬಾಲಕೃಷ್ಣ ಬಾಣಜಾಲು, ಪಂಜಿಗದ್ದೆ ಈಶ್ವರಭಟ್‌, ಬಂಗಾರಡ್ಕ ವಿಶ್ವೇಶ್ವರ ಭಟ್‌, ಜಯಂತ ನಡುಬೈಲು, ಅಬೂಬಕ್ಕರ್‌ ಮುಲಾರ್‌, ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ’ವಿಷಮುಕ್ತ ಭೂಮಿ-ರೋಗಮುಕ್ತ ಭಾರತ’ ಎನ್ನುವ ಬಗ್ಗೆ ಮಾಹಿತಿ ಕಾರ್ಯಗಾರ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಹಾಸನ ಜಿಲ್ಲೆಯ ಕೃಷಿ ತಜ್ಞ ಜಯಕುಮಾರ್‌ ಉಡುವಾರೆ ಹಾಗೂ ತುರುವೆಕೆರೆಯ ಸಾವಯವ ಕೃಷಿ ತಜ್ಞ ಶಿವಶಂಕರ್‌ ಡಿ.ಸಿ ಇವರು ಮಾಹಿತಿ ನೀಡಲಿದ್ದಾರೆ.

- Advertisement -

Related news

error: Content is protected !!