75000 ಜನರಿಗೆ 3.5 ಕೋಟಿ ವೆಚ್ಚದ ವಸ್ತ್ರ ವಿತರಣೆ






ಪುತ್ತೂರು: ರೈ ಎಸ್ಟೇಟ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರತಿ ವರ್ಷದಂತೆ ನಡೆಯುವ ದೀಪಾವಳಿಯ ವಸ್ತ್ರ ವಿತರಣೆ ಈ ಬಾರಿ ನ. 2ರಂದು ಪುತ್ತೂರಿನ ಕೊಂಬೆಟ್ಟು ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.
ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕಾರ್ಯಕ್ರಮದ ವಿವರಣೆ ನೀಡಿದರು.
ಈ ವರ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮಕ್ಕೆ ಹೊಸ ಹೆಸರನ್ನು ಇಡಲಾಗುತ್ತದೆ. ಈ ಬಾರಿ ಕೇವಲ ವಸ್ತ್ರಕ್ಕೆ 3.5ಕೋಟಿ ವೆಚ್ಚವಾಗಲಿದೆ ಅವೆಲ್ಲವೂ ನಮ್ಮ ಸ್ವಂತ ಹಣದಲ್ಲಿ ಖರೀದಿಸುವುದು. ಬಾರಿ 75000 ಜನಕ್ಕೆ ವಸ್ತ್ರ, ವಿತರಣೆ ಹಾಗೂ 45 ಸಾವಿರ ಜನಕ್ಕೆ ಊಟದ ವ್ಯವಸ್ಥೆ ಮಾಡಲಾಗುವುದು.ಮಹಾಲಿಂಗೇಶ್ವರ ದೇವಸ್ಥಾನದಿಂದ ಕೊಂಬೆಟ್ಟು ವಯಸ್ಕರಿಗೆ ಆಟೋ ರಿಕ್ಷಾ ಅಥವಾ ಬಗ್ಗಿ ವಾಹನ ವ್ಯವಸ್ಥೆ ಇರಲಿದೆ. ಗೂಡುದೀಪ ಸ್ಪರ್ಧೆಗೆ ಬಹುಮಾನವಿದೆ ಎಂದು ಅಶೋಕ್ ಕುಮಾರ್ ರೈ ತಿಳಿಸಿದರು.
ಇದು ಕಾಂಗ್ರೇಸ್ ಪಕ್ಷದ ಸಮಾವೇಶವಲ್ಲ, ಇದು ದೀಪಾವಳಿಯ ವಸ್ತ್ರ,ವಿತರಣೆ ಎಲ್ಲರ ಸಹಕಾರ ಅಗತ್ಯ ಎಂದು ಸಭೆಯಲ್ಲಿ ಸೇರಿದ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಚುನಾವಣೆ ನೀತಿ ಸಂಹಿತೆ ಇರುವುದರಿಂದ ಆಮಂತ್ರಣವನ್ನು ಪಾಟ್ಸಾಪ್ನಲ್ಲಿ ಎಲ್ಲರಿಗೂ ಕಳುಹಿಸಿ. ಶಾಸಕರ ನೆಲೆಯಲ್ಲಿ ನಿಲ್ಲುವ ಯೋಗ್ಯತೆ ಬಂದಿದೆ ಅಂದರೆ ಅದರಲ್ಲಿ ಒಂದು ವಸ್ತ ವಿತರಣಾ ಕಾರ್ಯಕ್ರಮದ ಪಾಲು ಇದೆ. ಸಮಾಜದಲ್ಲಿ ಸೂಕ್ಷ್ಮ ವಲಯದಲ್ಲಿ ಕೆಲಸ ಮಾಡುವವರನ್ನು ಹುಡುಕಿ ಸನ್ಮಾನ ಮಾಡುವುದು ಎಂದು ತೀರ್ಮಾನಿಸಲಾಗಿದೆ ಎಂದರು.
ಈ ಪೂರ್ವಭಾವಿ ಸಭೆಯಲ್ಲಿ ಕಾವು ಹೇಮನಾಥ ಶೆಟ್ಟಿ,ಟ್ರಸ್ಟ್ನ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ, ನಿಹಾಲ್ ರೈ, ಅಮಳ ರಾಮಚಂದ್ರ, ಮುರಳೀಧರ ರೈ ಮಠಂದಬೆಟ್ಟು, ನಿರಂಜನ ರೈ ಮಠಂದಬೆಟ್ಟು, ಜಯಪ್ರಕಾಶ ಬದಿನಾರು, ಕೃಷ್ಣ ಪ್ರಸಾದ್ ಬೊಳ್ಳಾವು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಬಾಲಕೃಷ್ಣ ಪೂಜಾರಿ ನಿರೂಪಿಸಿದರು.