Sunday, June 29, 2025
spot_imgspot_img
spot_imgspot_img

ಪುತ್ತೂರು: 24 ವರ್ಷ ಸೇನೆಯಲ್ಲಿ ಸೇವೆಗೈದ ಸೇನಾಧಿಕಾರಿ ಸತೀಶ. ಪಿ ಸೇನಾವೃತ್ತಿಯಿಂದ ನಿವೃತ್ತಿ

- Advertisement -
- Advertisement -

ಪುತ್ತೂರು ತಾಲೂಕು ಹಿರೇಬಂಡಾಡಿ ಗ್ರಾಮ ಪಲ್ಲೆಜಾಲುವಿನ ಸೇನಾಧಿಕಾರಿ ಸತೀಶ. ಪಿ ಇವರು ಸೇನಾವೃತ್ತಿಯಿಂದ ನಿವೃತ್ತಿಗೊಳ್ಳುತ್ತಿದ್ದಾರೆ.

ಕಳೆದ 24 ವರ್ಷಗಳಿಂದ ಭಾರತದ ವಿವಿಧ ಪ್ರದೇಶಗಳಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಿರುವ ಇವರು ಪಲ್ಲೆಜಾಲುವಿನ ಅಣ್ಣು ಗೌಡ ಹಾಗೂ ಸೀತಮ್ಮ ದಂಪತಿಗಳ ಪುತ್ರರಾಗಿದ್ದಾರೆ. 2000 ಇಸವಿಯಲ್ಲಿ ಮಹಾರಾಷ್ಟ್ರದ ಆರ್ಟಿಲರಿ ಸೆಂಟರ್ ನಾಸಿಕ್‌ ರೋಡ್ ಕ್ಯಾಂಪ್ ನಲ್ಲಿ ಸೇನಾತರಬೇತಿ ಮುಗಿಸಿ ನಂತರ ವಿವಿಧ ಪ್ರದೇಶಗಳಲ್ಲಿ ಸೇನಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. 2024ನೇ ಜೂನ್ 20ರಿಂದ ಪಂಜಾಬ್‌ನ ಫಿರೋಜ್ಪುರ್ ಕ್ಯಾಂಟ್ 310 FD ರೆಜಿಮೆಂಟ್‌ನಲ್ಲಿ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದು ಸೆಪ್ಟೆಂಬರ್ 30 ರಂದು ಸೇನಾ ನಿವೃತ್ತಿಯನ್ನು ಹೊಂದುತ್ತಿದ್ದಾರೆ.

ಸತೀಶ ಪಿ. ಯವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಬಂಡಾಡಿಯಲ್ಲಿ ಹಾಗೂ ಪ್ರೌಢ ಶಿಕ್ಷಣವನ್ನು ಸರಕಾರಿ ಪ್ರೌಢಶಾಲೆ ಉಪ್ಪಿನಂಗಡಿ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಪದವಿ ಪೂರ್ವ ಕಾಲೇಜು ಉಪ್ಪಿನಂಗಡಿಯಲ್ಲಿ ಪೂರೈಸಿರುತ್ತಾರೆ. ಸೈನಿಕ ವೃತ್ತಿಯಲ್ಲಿ ಸೇನಾಧಿಕಾರಿಯಾಗಿ MACP NB/ SUB ಎಂಬ ರ್‍ಯಾಂಕ್‌ ಗಳಿಸಿರುತ್ತಾರೆ.

ಇವರ ಪತ್ನಿ ಭರತನಾಟ್ಯ ಕಲಾವಿದೆ ವಿದುಷಿ ಶ್ರೀಮತಿ ಪ್ರಥ್ವಿ ಸತೀಶ್ ಇವರು ವೃತ್ತಿಯಲ್ಲಿ ಪ್ರಸ್ತುತ ಪ್ರಸನ್ನ ಶಿಕ್ಷಣ ಮಹಾವಿದ್ಯಾಲಯ ಬೆಳ್ತಂಗಡಿಯಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಓರ್ವ ಪುತ್ರಿ ಬೇಬಿ ಚೈಶ್ವಿ. ಎಸ್ ಇವರನ್ನು ಹೊಂದಿರುತ್ತಾರೆ.

- Advertisement -

Related news

error: Content is protected !!