





ಪುತ್ತೂರು: ಮನೆಯಲ್ಲಿ ಯಾರೂ ಇಲ್ಲದ ವೇಳೆ ಹಾಡುಹಗಲೇ ಮನೆಗೆ ನುಗ್ಗಿ ಲಕ್ಷಾಂತರ ರೂ. ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ ಘಟನೆ ಸರ್ವೆ ಗ್ರಾಮದ ಭಕ್ತಕೋಡಿ ಕಲ್ಲಮೆ ಎಂಬಲ್ಲಿ ನಡೆದಿದೆ.
ಕಿಶೋರ್ ಎಂಬವರ ದೂರಿನಂತೆ ಡಿ.20ರಂದು ಬೆಳಿಗ್ಗೆ ಕಿಶೋರ್ರವರು ಕೂಲಿ ಕೆಲಸಕ್ಕೆಂದು ಹೋಗಿದ್ದು, ಅವರ ಪತ್ನಿ ಬೆಳಿಗ್ಗೆ ಔಷಧಿ ತರಲು ಪುತ್ತೂರಿಗೆ ಹೋಗಿದ್ದವರು, ಮರಳಿ ಮಧ್ಯಾಹ್ನ ಸಮಯ ಮನೆಗೆ ಬಂದಾಗ, ಮನೆಯ ಎರಡು ರೂಂ ಗಳಲ್ಲಿ ಇದ್ದ ಎರಡು ಕಬ್ಬಿಣದ ಕಪಾಟುಗಳು ತೆರದ ಸ್ಥಿತಿಯಲ್ಲಿದ್ದು, ಅದರಲ್ಲಿದ್ದ ಬಟ್ಟೆ ಬರೆಗಳು ಚೆಲ್ಲಾಪಿಲ್ಲಿಯಾಗಿರುವುದು ಕಂಡುಬಂದಿರುತ್ತದೆ. ಬಳಿಕ ಹಿಂದಿನ ಬಾಗಿಲು ಹೋಗಿ ನೋಡಿದಾಗ ಬಾಗಿಲನ್ನು ಒಡೆದು ತೆರೆದಿದ್ದು, ಈ ಬಗ್ಗೆ ಕಿಶೋರ್ರವರಿಗೆ ಅವರ ಪತ್ನಿಈ ಬಗ್ಗೆ ತಿಳಿಸಿದ್ದು, ಕೂಡಲೇ ಮನೆಗೆ ಬಂದು ಪರಿಶೀಲಿಸಿದಾಗ ಕಪಾಟಿನಲ್ಲಿದ್ದ ಅಂದಾಜು ರೂ 1,80,000/- ಮೌಲ್ಯದ ಒಟ್ಟು 88 ಗ್ರಾಂ ಚಿನ್ನಾಭರಣಗಳು ಹಾಗೂ 20,000/- ರೂ ನಗದು ಕಳವಾಗಿರುವುದು ತಿಳಿದುಬಂದಿರುತ್ತದೆ.
ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ 147/2024 ಕಲಂ: 305 ಬಿಎನ್ ಎಸ್ ರಂತೆ ಪ್ರಕರಣ ದಾಖಲಾಗಿರುತ್ತದೆ.