- Advertisement -
- Advertisement -
ಪುತ್ತೂರು: ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಸ್ಥಾಪನೆಗೊಂಡ ವಿಶ್ವ ಹಿಂದೂ ಪರಿಷತ್ ಇದರ ಸ್ಥಾಪನಾ ದಿನದ ಪ್ರಯುಕ್ತ ಹಲವು ವರುಷಗಳಿಂದ ಪುತ್ತೂರಿನಲ್ಲಿ ವಿಜೃಂಭಣೆಯಿಂದ ನಡೆಯುವ ಪುತ್ತೂರು ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮದ ಈ ವರುಷ ನಡೆಯುವ 13ನೇ ವರುಷದ ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿಯ ಅಧ್ಯಕ್ಷರಾಗಿ ಕಿಶೋರ್ ಕುಮಾರ್ ಬೊಟ್ಯಾಡಿ, ಸಮಿತಿಯ ಸಂಚಾಲಕರಾಗಿ ಶ್ಯಾಮ್ ಸುದರ್ಶನ್ ಹೊಸಮೂಲೆ, ಸಮಿತಿಯ ಕಾರ್ಯದರ್ಶಿಯಾಗಿ ರೂಪೇಶ್ ಬಲ್ನಾಡ್, ಕೋಶಾಧಿಕಾರಿಯಾಗಿ ರವಿಕುಮಾರ್ ಕೈತ್ತಡ್ಕ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರುಗಳಾಗಿ ಸೀತಾರಾಮ ರೈ ಕೆದಂಬಾಡಿಗುತ್ತು, ಭಾಸ್ಕರ ಪೆರುವಾಯಿ, ಬಿ. ಮಹಾಬಲೇಶ್ವರ ಪ್ರಕಾಶ್, ಅರುಣ್ ಕುಮಾರ್ ಅನಾಜೆ, ಯಶವಂತ ಎನ್ ವಿಟ್ಲ, ಸಹ ಕಾರ್ಯದರ್ಶಿಗಳಾಗಿ ಪ್ರವೀಣ್ ಕಲ್ಲೇಗ, ಜಗದೀಶ್ ನೀರ್ಪಾಜೆ, ಅಜಿತ್ ಕೆಯ್ಯೂರು ಮತ್ತು ಸಹ ಕೋಶಾಧಿಕಾರಿಗಳಾಗಿ ಸೇಸಪ್ಪ ಬೆಳ್ಳಿಪ್ಪಾಡಿ, ಹರ್ಷಿತ್ ಬಲ್ನಾಡ್ ಅಯ್ಕೆಯಾಗಿದ್ದಾರೆ.
- Advertisement -