Friday, April 26, 2024
spot_imgspot_img
spot_imgspot_img

ವಿಟ್ಲ: ಆರ್ ಕೆ ಆರ್ಟ್ಸ್ ಚಿನ್ನರ ಮನೆ (ರಿ) ಇದರ ವತಿಯಿಂದ ನಡೆದ ರಾಜ್ಯಮಟ್ಟದ ಮಕ್ಕಳ ಬೇಸಿಗೆ ಶಿಬಿರ ಚಿನ್ನರ ಹಬ್ಬ ಸಮಾರೋಪ ಸಮಾರಂಭ

- Advertisement -G L Acharya panikkar
- Advertisement -

ಆರ್ ಕೆ ಆರ್ಟ್ಸ್ ಚಿನ್ನರ ಮನೆ ರಿ ವಿಟ್ಲ ಇದರ ವತಿಯಿಂದ ರಾಜ್ಯಮಟ್ಟದ ಮಕ್ಕಳ ಬೇಸಿಗೆ ಶಿಬಿರ ಚಿನ್ನರ ಹಬ್ಬ ಮಕ್ಕಳ ಮಾಯಾಲೋಕದ ಸಮಾರೋಪ ಸಮಾರಂಭದ ಮೂಲಕ ಈ ವರ್ಷದ ಸಂಭ್ರಮಕ್ಕೆ ತೆರೆ ಬಿದ್ದಿದೆ. 210 ಮಕ್ಕಳನ್ನು ಒಳಗೊಂಡ ಉಚಿತ ಬೇಸಿಗೆ ಶಿಬಿರವು ಪೋಷಕರ ಸಹಕಾರದಿಂದ ಯಶಸ್ವಿಯಾಗಿ ನಡೆದಿದೆ. ಮಕ್ಕಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಉತ್ತಮ ಸಂಸ್ಕಾರ ತುಂಬಿದ ಈ ಕಾರ್ಯಕ್ರಮ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡಿತು.

ಸಮಾರಂಭದ ಅಧ್ಯಕ್ಷತೆಯನ್ನು ಕೃಷ್ಣಯ್ಯ ಕೆ ವಿಟ್ಲ ಅರಮನೆ ವಹಿಸಿಕೊಂಡರು. ಬಂಗಾರು ಅರಸರು ವಿಟ್ಲ ಅರಮನೆ ಇವರ ದಿವ್ಯ ಉಪಸ್ಥಿತಿಯೊಂದಿಗೆ, ಚಂದ್ರಹಾಸ ಸುವರ್ಣ ಶ್ರೀ ದೇವಿ ಶಾಮಿಯಾನ, ವಿಶ್ವನಾಥ ಗೌಡ ಮುಖ್ಯೋಪಾಧ್ಯಾಯರು ಚಂದಳಿಕೆ ಶಾಲೆ, ಆರ್ ಕೆ ಕಲಾ ಸಂಸ್ಥೆಗಳ ನಿರ್ದೇಶಕ ರಾಜೇಶ್ ವಿಟ್ಲ, ಮಕ್ಕಳ ಪೋಷಕರು, ವಿದ್ಯಾರ್ಥಿ ಸಮೂಹ ಭಾಗವಹಿಸಿತು.

ಮಕ್ಕಳ ಪ್ರತಿಭೆಗಳನ್ನು ಪ್ರದರ್ಶಿಸಲಾಯಿತು. ಪ್ರಮಾಣಪತ್ರ ಕೊಡುವ ಮೂಲಕ ಗೌರವಿಸಲಾಯಿತು. ರಮೇಶ್ ಬಿ ಕೆ ಅಧ್ಯಾಪಕ ಕಾರ್ಯಕ್ರಮ ನಿರೂಪಿಸಿ, ಜಯಶ್ರೀ ಟೀಚರ್ ವಿಟ್ಲ ಸ್ವಾಗತಿಸಿ, ಧನಲಕ್ಷ್ಮಿ ರಾಜೇಶ್ ಧನ್ಯವಾದ ಸಮರ್ಪಿಸಿದರು.

- Advertisement -

Related news

error: Content is protected !!