Friday, April 26, 2024
spot_imgspot_img
spot_imgspot_img

ಅರ್ಜುನ್ ವೆಡ್ಸ್ ಅಮೃತ ಖ್ಯಾತಿಯ ನಿರ್ದೇಶಕ ರಘು ಶೆಟ್ಟಿ ನಿಧನ

- Advertisement -G L Acharya panikkar
- Advertisement -

ಮಂಗಳೂರು: “ಅರ್ಜುನ್ ವೆಡ್ಸ್ ಅಮೃತ” ತುಳು ಸಿನಿಮಾದ ನಿರ್ದೇಶಕ ರಘು ಶೆಟ್ಟಿ (39) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು. ಮೃತರು ಮೂಡಬಿದ್ರೆಯವರಾಗಿದ್ದು, ಪತ್ನಿ, ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಈ ಹಿಂದೆ ಉದಯ ಟಿವಿಯಲ್ಲಿ ಉದ್ಯೋಗದಲ್ಲಿದ್ದು, ಬಳಿಕ ತುಳುಸಿನಿಮಾರಂಗದಲ್ಲಿ ನಿರ್ದೇಶಕರಾಗಿ ಕೆಲಸ ಮಾಡಿದರು. ಬೆಂಗಳೂರಿನಲ್ಲಿ ಹೊಟೇಲ್ ಉದ್ಯಮವನ್ನೂ ನಡೆಸಿದ್ದರು. ಈ ಮಧ್ಯೆ ಕನ್ನಡ ಸಿನಿಮಾ ನಿರ್ದೇಶನದ ತಯಾರಿಯಲ್ಲೂ ಇದ್ದರು. ಮೃತರ ನಿಧನಕ್ಕೆ ಕೋಸ್ಟಲ್ ವುಡ್ ತೀವ್ರ ಸಂತಾಪ ವ್ಯಕ್ತಪಡಿಸಿದೆ.

- Advertisement -

Related news

error: Content is protected !!