ಬಂಟ್ವಾಳ(ನ.9): ನರಿಕೊಂಬು ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಟಿ ಶ್ರೀ ಕೋದಂಡರಾಮ ದೇವಸ್ಥಾನಕ್ಕೆ ಕುಡಿಯುವ ನೀರಿನ ಯೋಜನೆ ಮತ್ತು ನಿರ್ವಹಣೆಗೆ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಮಮತಾ ಗಟ್ಟಿ ಯವರ 0.50ಲಕ್ಷ ಮತ್ತು ತಾಲೂಕು ಪಂಚಾಯತ್ ಸದಸ್ಯರಾದ ಶ್ರೀಮತಿ ಗಾಯತ್ರಿ ರವೀಂದ್ರ ಸಪಲ್ಯ ರವರ 1.10 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಈ ನೀರಿನ ಟ್ಯಾಂಕಿಯ ಗುದ್ದಲಿ ಪೂಜೆಯನ್ನು ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ ರಮಾನಾಥ ರೈ ಯವರು ನೆರೆವೇರಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ಪುರಷೋತ್ತಮ ನಾಟಿ ಮತ್ತು ಸಮಿತಿಯ ಸದಸ್ಯರಾದ ಕೃಷ್ಣಪ್ಪ ಪೂಜಾರಿ ನಾಟಿ, ಕೃಷ್ಣಪ್ಪ ನಾಯ್ಕ ಶಂಭೂರು ಮತ್ತು ತಾಲೂಕು ಪಂಚಾಯತ್ ಸದಸ್ಯರಾದ ಶ್ರೀಮತಿ ಗಾಯತ್ರಿ ರವೀಂದ್ರ ಸಪಲ್ಯ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ,ಪಾಣೆಮಂಗಳೂರು ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಅಲ್ಬರ್ಟ್ ಮೆನೇಜಸ್, ವಲಯ ಕಾಂಗ್ರೆಸ್ ಅಧ್ಯಕ್ಷರಾದ ಮಾಧವ ಪೂಜಾರಿ ಕರ್ಬೆಟ್ಟು,ಯುವ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸಾದ್ ಕರ್ಬೆಟ್ಟು, ಮಾಜಿ ಪಂಚಾಯತ್ ಅಧ್ಯಕ್ಷರಾದ ಆನಂದ ಸಾಲಿಯಾನ್, ಶಂಭೂರು ಮಾಜಿ ಸದಸ್ಯರಾದ ವಿಶ್ವನಾಥ್ ಪೂಜಾರಿ, ರವೀಂದ್ರ ಸಪಲ್ಯ, ಗೋವಿಂದ ಪೂಜಾರಿ ವಲಬೆ, ಪ್ರಮುಖರಾದ ಹರೀಶ್. ಕೆ,ಸುಂದರ ಸಾಲಿಯಾನ್, ಕರ್ಬೆಟ್ಟು, ದಿವಾಕರ ಪೂಜಾರಿ ಅಬೇರೊಟ್ಟು, ಶ್ರೀನಿವಾಸ್ ನಾಟಿ,ವಾಮನ ನಾಟಿ,ಹಶೀಶ್,ವಿಠಲ ಕೋಟ್ಯಾನ್ ನಾಟಿ, ಪೂವಪ್ಪ ನಾಟಿ ಹಾಗೂ ಶ್ರೀದೇವರ ಭಕ್ತಾದಿಗಳು ಪಾಲ್ಗೊಂಡಿದ್ದರು.