- Advertisement -
- Advertisement -
ರಾಯಚೂರು: ಬೀದಿ ಬದಿ ಮಾರಾಟ ಮಾಡುತ್ತಿದ್ದ ಸೊಪ್ಪು ತರಕಾರಿಯನ್ನು ಕಾಲಿನಿಂದ ಒದ್ದು ಸದರ್ ಬಜಾರ್ ಪಿಎಸ್ಐ ಅಜಂ ದರ್ಪ ಮೆರೆದಿದ್ದಾರೆ.
ನಗರದ ಚಂದ್ರಮೌಳೇಶ್ವರ ವೃತ್ತದ ಬಳಿ ಈ ಘಟನೆ ನಡೆದಿದ್ದು, ಸಾರ್ವಜನಿಕರು ಪೊಲೀಸ್ ಅಧಿಕಾರಿ ವರ್ತನೆಯ ಬಗ್ಗೆ ಅಸಮಧಾನ ಹೊರಹಾಕಿದ್ದಾರೆ.
ಜಿಲ್ಲೆಯಲ್ಲಿ ವೀಕೆಂಡ್ ಲಾಕ್ಡೌನ್ ಜಾರಿಯಲ್ಲಿದ್ದು, ಕೆಲ ಮಹಿಳೆಯರು ಚಂದ್ರಮೌಳೇಶ್ವರ ವೃತ್ತದ ಬಳಿ ಸೊಪ್ಪು ತರಕಾರಿ ಮಾರುತ್ತಿದ್ದರು. ಸ್ಥಳಕ್ಕೆ ಏಕಾಏಕಿ ಬಂದ ಪಿಎಸ್ಐ ಅಜಂ ತರಕಾರಿ ಹಾಗೂ ಸೊಪ್ಪನ್ನ ಕಾಲಿನಿಂದ ಒದ್ದು, ತರಕಾರಿಯನ್ನ ಚಲ್ಲಾಪಿಲ್ಲಿ ಎಸೆದು ದರ್ಪ ತೋರಿದ್ದಾರೆ.
- Advertisement -