Wednesday, June 26, 2024
spot_imgspot_img
spot_imgspot_img

ರೇಣುಕಾ ಸ್ವಾಮಿ ಅಪಹರಣಕ್ಕೆ ಬಳಸಿದ್ದ ಕಾರು ವಶ; ಚಾಲಕನ ಮನೆಯಲ್ಲಿ ತೀವ್ರ ವಿಚಾರಣೆ

- Advertisement -G L Acharya panikkar
- Advertisement -

ನಟ ದರ್ಶನ್​ ಮತ್ತು ಗ್ಯಾಂಗ್​ ಸೇರಿ ನಡೆಸಿದ್ದಾರೆ ಎನ್ನಲಾದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೇಣುಕಾ ಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಿಸಿಕೊಂಡು ಬೆಂಗಳೂರಿಗೆ ಕರೆದುಕೊಂಡ ಬರಲಾಗಿತ್ತು. ಅಪಹರಣ ನಡೆಸಲು ರವಿಶಂಕರ್​ ಎಂಬಾತನ ಕಾರನ್ನು ಬಳಸಿದ್ದರು. ಚಾಲಕ ರವಿಶಂಕರ್​ 8ನೇ ಆರೋಪಿ ಆಗಿದ್ದಾನೆ.

ಚಿತ್ರದುರ್ಗದಲ್ಲಿ ಇರುವ ರವಿಶಂಕರ್ ಮನೆಯಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ, ಆತನ ಕಾರನ್ನು ಜಪ್ತಿ ಮಾಡಲಾಗಿದೆ. ಚಿತ್ರದುರ್ಗ ತಾಲೂಕಿನ ಐನಳ್ಳಿ ಕುರುಬರಹಟ್ಟಿಯಲ್ಲಿ ರವಿಶಂಕರ್​​ ಮನೆ ಇದೆ. ಕೊಲೆ ನಡೆದ ಬಳಿಕ ದರ್ಶನ್​ ಹಾಗೂ ಗ್ಯಾಂಗ್​ನಿಂದ 5 ಲಕ್ಷ ರೂಪಾಯಿ ಪಡೆದಿದ್ದಾನೆ ಎಂಬ ಮಾಹಿತಿ ಇದೆ. ರವಿಶಂಕರ್​ ಮನೆಯಲ್ಲಿ ಪೊಲೀಸರು ಹಲವು ಗಂಟೆಗಳ ಕಾಲ ಪರಿಶೀಲನೆ ನಡೆಸಿದ್ದಾರೆ. ಮನೆಯಲ್ಲಿ ವಿಚಾರಣೆ ತೀವ್ರಗೊಂಡಿದೆ. ಕಾಮಾಕ್ಷಿಪಾಳ್ಯ ಸಿಪಿಐ ಸುಬ್ರಹ್ಮಣ್ಯ ನೇತೃತ್ವದಲ್ಲಿ ವಿಚಾರಣೆ ನಡೆದಿದ್ದು, ಇದರಲ್ಲಿ ರವಿಶಂಕರ್ ಕುಟುಂಬಸ್ಥರಿಗೆ ಹಲವು ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆಯಲಾಗಿದೆ. ಜೂ.8ರಂದು ರೇಣುಕಾಸ್ವಾಮಿ ಕಿಡ್ನ್ಯಾಪ್​​ಗೆ ರವಿಶಂಕರ್​ ಕಾರು ಬಳಕೆ ಆಗಿತ್ತು. ಜೂ.9ರಂದು ಆರೋಪಿಗಳು ಅದೇ ಕಾರಿನಲ್ಲಿ ಚಿತ್ರದುರ್ಗಕ್ಕೆ ವಾಪಸ್​ ಬಂದಿದ್ದರು.

- Advertisement -

Related news

error: Content is protected !!