Wednesday, July 22, 2026
spot_imgspot_img
spot_imgspot_img

ಮಹಾರಾಷ್ಟ್ರದಲ್ಲಿ ರಸ್ತೆ ಅಪಘಾತ; ಮಂಗಳೂರು ಮೂಲದ ಟ್ರಕ್ ಚಾಲಕ ಮೃತ್ಯು

- Advertisement -
- Advertisement -

ಮಂಗಳೂರು: ಮಹಾರಾಷ್ಟ್ರದ ರತ್ನಗಿರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮುಡಿಪು ಬಳಿಯ ಬೋಳಿಯಾರ್‌ನ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೃತರನ್ನು ಬೋಳಿಯಾರ್ ನಿವಾಸಿ ಮುಹಮ್ಮದ್ ರಿಜ್ವಾನ್(28) ಎಂದು ಗುರುತಿಸಲಾಗಿದೆ.

ರಿಜ್ವಾನ್ ಹಲವಾರು ವರ್ಷಗಳಿಂದ ಖಾಸಗಿ ಕಂಪನಿಯ ಮೂಲಕ ಮೀನು ಸಾಗಣೆ ಟ್ರಕ್‌ಗೆ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಪೊಲೀಸ್ ಮೂಲಗಳ ಪ್ರಕಾರ, ಫೆಬ್ರವರಿ 23 ರಂದು ರತ್ನಗಿರಿಯಲ್ಲಿ ಮೀನು ಸರಕನ್ನು ತಲುಪಿಸಲು ಹೋಗುತ್ತಿದ್ದಾಗ ಅವರ ಟ್ರಕ್ ಮತ್ತೊಂದು ಟ್ರಕ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು, ಡಿಕ್ಕಿಯಲ್ಲಿ ಗಂಭೀರ ಗಾಯಗೊಂಡ ರಿಜ್ವಾನ್ ಸ್ಥಳದಲ್ಲೇ ಕೊನೆಯುಸಿರೆಳೆದರು ಎನ್ನಲಾಗಿದೆ.

ಮೃತರು ಪತ್ನಿ, ಪೋಷಕರು, ಎರಡು ವರ್ಷದ ಮಗು, ಮೂವರು ಸಹೋದರರು ಮತ್ತು ಮೂವರು ಸಹೋದರಿಯರನ್ನು ಅಗಲಿದ್ದಾರೆ.

- Advertisement -

Related news

error: Content is protected !!