ಮಂಗಳೂರು: ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಮಂಗಳೂರು ತಾಲೂಕಿನ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅದ್ಯಪಾಡಿ ಪದವು ಚರ್ಚ್ ಬಳಿ 11 ನೇ ಕ್ರಾಸ್ ನ ಪರಿಶಿಷ್ಟ ಜಾತಿ ಕಾಲೋನಿ ರಸ್ತೆಯನ್ನು 13.30 ಲಕ್ಷ ರೂಪಾಯಿ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗೆ ಬುಧವಾರ ಶಾಸಕರಾದ ಡಾ. ವೈ ಭರತ್ ಶೆಟ್ಟಿಯವರು ಗುದ್ದಲಿಪೂಜೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಕಾಂಕ್ರೀಟಿಕರಣಗೊಂಡ ರಸ್ತೆಯನ್ನು ಶಾಸಕರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಅದ್ಯಪಾಡಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾದ ತುಕಾರಾಮ್ ಶೆಟ್ಟಿ,ಸಹಪ್ರಮುಖ್ ಮಿಥುನ್, ಪಂಚಾಯತ್ ಅಧ್ಯಕ್ಷರಾದ ಉಮೇಶ್ , ಮಂಗಳೂರು ನಗರ ಉತ್ತರ ಮಂಡಲದ ಕಾರ್ಯದರ್ಶಿ ಶೋಧನ್ ಬಂಗೇರ, ವಿಶ್ವ ಹಿಂದು ಪರಿಷತ್ ಭಜರಂಗದಳದ ವಿಭಾಗ ಸಂಚಾಲಕರಾದ ಭುಜಂಗ ಕುಲಾಲ್, ಬಜರಂಗದಳ ಸಂಚಾಲಕರಾದ ರಜನಿಕಾಂತ್ ಹಾಗೂ ಸುರಕ್ಷಾ ಪ್ರಮುಖ ನಿಶಾಂತ್, ವಿಶ್ವ ಹಿಂದು ಪರಿಷತ್ ನಾ ಅಧ್ಯಕ್ಷರಾದ ಚಂದ್ರಹಾಸ್ ದೇವಾಡಿಗ, ಹಾಗೂ ಉಪಾಧ್ಯಕ್ಷರಾದ ಕುಮಾರ್ ಡಿ ಶೆಟ್ಟಿ ಸಂಕೇಶ, ಮಾಜಿ ತಾಲೂಕ್ ಪಂಚಾಯತ್ ಸದಸ್ಯರಾದ ಶಿವಪ್ಪ ಬಂಗೇರ, ಮಾಜಿ ಪಂಚಾಯತ್ ಸದಸ್ಯರಾದ ಜಯರಾಮ್ ಪೂಜಾರಿ, ಯಾದವ್ ಕುಲಾಲ್,ಅಮರ್ ನಾಥ ಶೆಟ್ಟಿ,ಪ್ರವೀಣ್ ಕುಮಾರ್, ಆಶಾ ಕಾರ್ಯಕರ್ತೆ ಬಬಿತಾ, SDMC ಅಧ್ಯಕ್ಷರು ಶೋಭಾ ತುಕಾರಾಮ್, PWD ಇಂಜಿನಿಯರ್ ಗೋಪಾಲ್ , ಗುತ್ತಿಗೆದಾರರು ಹಾಗೂ ಅದ್ಯಪಾಡಿ ಯ ಬಿಜೆಪಿಯ ಕಾರ್ಯಕರ್ತರು ಹಾಗೂ ಅದ್ಯಪಾಡಿ ಗ್ರಾಮಸ್ಥರು ಉಪಸ್ಥಿತರಿದ್ದರು.