Wednesday, May 1, 2024
spot_imgspot_img
spot_imgspot_img

ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್‌ ಚಂದ್ರಶೇಖರ್ ಬರ್ಬರ ಹತ್ಯೆ; ಜೋಡಿ ಕೊಲೆಗೆ ಪ್ರತೀಕಾರವಾಗಿ ಈ ಹತ್ಯೆ ನಡೆಯಿತಾ..?

- Advertisement -G L Acharya panikkar
- Advertisement -
vtv vitla

ಮೈಸೂರು: ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್​ನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವಂತಹ ಘಟನೆ ಮೈಸೂರಿನಲ್ಲಿ ನಡೆದಿದೆ.

ಒಂಟಿಕೊಪ್ಪಲಿನ ನಿವಾಸಿ ಚಂದ್ರಶೇಖರ್ ಅಲಿಯಾಸ್ ಚಂದು ಹತ್ಯೆಗೀಡಾದ ರೌಡಿಶೀಟರ್​. ಕೊಲೆ ಆಗಿರುವ ಚಂದು ನಗರಪಾಲಿಕೆ ಮಾಜಿ ಸದಸ್ಯ ಅವ್ವಾ ಮಾದೇಶ್ ಆಪ್ತ ಎನ್ನಲಾಗುತ್ತಿದೆ. ಬೈಕ್​ಗಳಲ್ಲಿ ಬಂದ 6 ದುಷ್ಕರ್ಮಿಗಳು ಮಚ್ಚು, ಲಾಂಗ್​ನಿಂದ ಕೊಚ್ಚಿ ಬರ್ಬರ ಹತ್ಯೆಗೈದು ಪರಾರಿ ಆಗಿದ್ದಾರೆ.

ಕೆಲ ವರ್ಷದ ಹಿಂದೆ ಹುಣಸೂರು ನಡೆದ ಗಾಂಧಿ ಮತ್ತು ರಾಮು ಎಂಬವರ ಜೋಡಿ ಕೊಲೆ ಮಾಫಿಯಾ ಲೋಕವನ್ನೇ ಬೆಚ್ಚಿ ಬೀಳಿಸಿತ್ತು. ಇದರ ಪ್ರಮುಖ ಆರೋಪಿ ಚಂದು. ಕೆಲ ದಿನಗಳಿಂದಷ್ಟೇ ಜೈಲಿನಿಂದ ಹೊರ ಬಂದಿದ್ದ. ಈ ಕೊಲೆಯಲ್ಲಿ ರೌಡಿಶೀಟರ್‌ ಅವ್ವಾ ಮಾದೇಶ, ಆತನ ತಮ್ಮ ಮಂಜು ಮತ್ತು ಚಂದು, ಕಲ್ಲಪ್ಪ, ರವಿ, ಅಂಬಿ, ಕಾರ್ತಿ, ಸತೀಶ್‌ ಪ್ರಮುಖ ಆರೋಪಿಗಳಾಗಿದ್ದು ಜೈಲು ಶಿಕ್ಷೆ ಅನುಭವಿಸಿದರು. ಜೋಡಿ ಕೊಲೆಗೆ ಪ್ರತಿಕಾರವಾಗಿ ಈ ಕೊಲೆ ನಡೆದಿದೆ ಎನ್ನಲಾಗುತ್ತಿದೆ.

ಜೋಡಿ ಕೊಲೆಗೆ ಪ್ರತಿಕಾರವಾಗಿ ಅವ್ವಾ ಮಾದೇಶನಿಗೆ ಹೊಂಚು ಹಾಕುತ್ತಿದ್ದ ರೌಡಿ ದೇವು ಪಡುವಾರಳ್ಳಿಯನ್ನು ಕೊಲೆ ಮಾಡಿದ ಆರೋಪಿ. ಒಟ್ಟಿನಲ್ಲಿ ಭೂಗತ ಲೋಕವನ್ನು ಆಳುವ ಪ್ಲಾನ್‌ನಲ್ಲಿದ್ದ ಅವ್ವಾ ಮಾದೇಶನಿಗೆ ಈ ಕೊಲೆ ಭಾರೀ ಹಿನ್ನಡೆಯಾಗಿದೆ. ಘಟನಾ ಸ್ಥಳಕ್ಕೆ ಜಯಲಕ್ಷ್ಮಿಪುರಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

- Advertisement -

Related news

error: Content is protected !!