ಮೈಸೂರು: ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವಂತಹ ಘಟನೆ ಮೈಸೂರಿನಲ್ಲಿ ನಡೆದಿದೆ.
ಒಂಟಿಕೊಪ್ಪಲಿನ ನಿವಾಸಿ ಚಂದ್ರಶೇಖರ್ ಅಲಿಯಾಸ್ ಚಂದು ಹತ್ಯೆಗೀಡಾದ ರೌಡಿಶೀಟರ್. ಕೊಲೆ ಆಗಿರುವ ಚಂದು ನಗರಪಾಲಿಕೆ ಮಾಜಿ ಸದಸ್ಯ ಅವ್ವಾ ಮಾದೇಶ್ ಆಪ್ತ ಎನ್ನಲಾಗುತ್ತಿದೆ. ಬೈಕ್ಗಳಲ್ಲಿ ಬಂದ 6 ದುಷ್ಕರ್ಮಿಗಳು ಮಚ್ಚು, ಲಾಂಗ್ನಿಂದ ಕೊಚ್ಚಿ ಬರ್ಬರ ಹತ್ಯೆಗೈದು ಪರಾರಿ ಆಗಿದ್ದಾರೆ.
ಕೆಲ ವರ್ಷದ ಹಿಂದೆ ಹುಣಸೂರು ನಡೆದ ಗಾಂಧಿ ಮತ್ತು ರಾಮು ಎಂಬವರ ಜೋಡಿ ಕೊಲೆ ಮಾಫಿಯಾ ಲೋಕವನ್ನೇ ಬೆಚ್ಚಿ ಬೀಳಿಸಿತ್ತು. ಇದರ ಪ್ರಮುಖ ಆರೋಪಿ ಚಂದು. ಕೆಲ ದಿನಗಳಿಂದಷ್ಟೇ ಜೈಲಿನಿಂದ ಹೊರ ಬಂದಿದ್ದ. ಈ ಕೊಲೆಯಲ್ಲಿ ರೌಡಿಶೀಟರ್ ಅವ್ವಾ ಮಾದೇಶ, ಆತನ ತಮ್ಮ ಮಂಜು ಮತ್ತು ಚಂದು, ಕಲ್ಲಪ್ಪ, ರವಿ, ಅಂಬಿ, ಕಾರ್ತಿ, ಸತೀಶ್ ಪ್ರಮುಖ ಆರೋಪಿಗಳಾಗಿದ್ದು ಜೈಲು ಶಿಕ್ಷೆ ಅನುಭವಿಸಿದರು. ಜೋಡಿ ಕೊಲೆಗೆ ಪ್ರತಿಕಾರವಾಗಿ ಈ ಕೊಲೆ ನಡೆದಿದೆ ಎನ್ನಲಾಗುತ್ತಿದೆ.
ಜೋಡಿ ಕೊಲೆಗೆ ಪ್ರತಿಕಾರವಾಗಿ ಅವ್ವಾ ಮಾದೇಶನಿಗೆ ಹೊಂಚು ಹಾಕುತ್ತಿದ್ದ ರೌಡಿ ದೇವು ಪಡುವಾರಳ್ಳಿಯನ್ನು ಕೊಲೆ ಮಾಡಿದ ಆರೋಪಿ. ಒಟ್ಟಿನಲ್ಲಿ ಭೂಗತ ಲೋಕವನ್ನು ಆಳುವ ಪ್ಲಾನ್ನಲ್ಲಿದ್ದ ಅವ್ವಾ ಮಾದೇಶನಿಗೆ ಈ ಕೊಲೆ ಭಾರೀ ಹಿನ್ನಡೆಯಾಗಿದೆ. ಘಟನಾ ಸ್ಥಳಕ್ಕೆ ಜಯಲಕ್ಷ್ಮಿಪುರಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.