Friday, March 29, 2024
spot_imgspot_img
spot_imgspot_img

ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂತನ ಸರಕಾರ್ಯವಾಹ ಆಗಿ ದತ್ತಾತ್ರೇಯ ಹೊಸಬಾಳೆ ಆಯ್ಕೆ

- Advertisement -G L Acharya panikkar
- Advertisement -

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂತನ ಸರಕಾರ್ಯವಾಹ ( Secretary General) ಆಗಿ ದತ್ತಾತ್ರೇಯ ಹೊಸಬಾಳೆ ಆಯ್ಕೆಯಾಗಿದ್ದಾರೆ.

ಕರ್ನಾಟಕದ ಶಿವಮೊಗ್ಗದ ಸೊರಬ ತಾಲೂಕಿನ ದತ್ತಾತ್ರೇಯ ಹೊಸಬಾಳೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಲಯದಲ್ಲಿ ದತ್ತಾಜೀ ಎಂದೆ ಖ್ಯಾತರಾಗಿದ್ದರೆ.

ಎಬಿವಿಪಿಯ ಮೂಲಕ ಆರ್ ಎಸ್ ಎಸ್ ನ ಒಡನಾಟಕ್ಕೆ ಬಂದ ಹೊಸಬಾಳೆ ವಿವಿಧ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದಾರೆ.

2009ರಿಂದ ಸಂಘದ ಸಹ ಸರಕಾರ್ಯವಾಹರಾಗಿದ್ದ ಹೊಸಬಾಳೆ ಇದೀಗ ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತೀಯ ಪ್ರತಿನಿಧಿ ಸಭಾದಲ್ಲಿ ಆಯ್ಕೆ ಮಾಡಲಾಯಿತು.

ಮೂರು ವರ್ಷಕ್ಕೊಮ್ಮೆ ಸರಕಾರ್ಯವಾಹರ ಆಯ್ಕೆ ನಡೆಯುತ್ತದೆ. ಇಷ್ಟರವರೆಗೆ ಸುರೇಶ್ ಬಯ್ಯಾಜಿ ಜೋಷಿ ಸರಕಾರ್ಯವಾಹರಾಗಿದ್ದರು.

- Advertisement -

Related news

error: Content is protected !!