- Advertisement -
- Advertisement -
ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂತನ ಸರಕಾರ್ಯವಾಹ ( Secretary General) ಆಗಿ ದತ್ತಾತ್ರೇಯ ಹೊಸಬಾಳೆ ಆಯ್ಕೆಯಾಗಿದ್ದಾರೆ.
ಕರ್ನಾಟಕದ ಶಿವಮೊಗ್ಗದ ಸೊರಬ ತಾಲೂಕಿನ ದತ್ತಾತ್ರೇಯ ಹೊಸಬಾಳೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಲಯದಲ್ಲಿ ದತ್ತಾಜೀ ಎಂದೆ ಖ್ಯಾತರಾಗಿದ್ದರೆ.
ಎಬಿವಿಪಿಯ ಮೂಲಕ ಆರ್ ಎಸ್ ಎಸ್ ನ ಒಡನಾಟಕ್ಕೆ ಬಂದ ಹೊಸಬಾಳೆ ವಿವಿಧ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದಾರೆ.
2009ರಿಂದ ಸಂಘದ ಸಹ ಸರಕಾರ್ಯವಾಹರಾಗಿದ್ದ ಹೊಸಬಾಳೆ ಇದೀಗ ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತೀಯ ಪ್ರತಿನಿಧಿ ಸಭಾದಲ್ಲಿ ಆಯ್ಕೆ ಮಾಡಲಾಯಿತು.
ಮೂರು ವರ್ಷಕ್ಕೊಮ್ಮೆ ಸರಕಾರ್ಯವಾಹರ ಆಯ್ಕೆ ನಡೆಯುತ್ತದೆ. ಇಷ್ಟರವರೆಗೆ ಸುರೇಶ್ ಬಯ್ಯಾಜಿ ಜೋಷಿ ಸರಕಾರ್ಯವಾಹರಾಗಿದ್ದರು.
- Advertisement -