- Advertisement -
- Advertisement -
ದಕ್ಷಿಣ ಕನ್ನಡ: ತುಂಬೆ ಡ್ಯಾಂನಿಂದ ಮರಳು ತೆಗೆದು ಜನರಿಗೆ ಸುಲಭವಾಗಿ ಮಾರಟ ಮಾಡಲು Sandbazer ಆ್ಯಪನ್ನು ಕಿಯೊನಿಕ್ಸ್ನಿಂದ ಪಡೆಯಲಾಗಿದೆ. ಸಾರ್ವಜನಿಕರಿಗೆ ಮರಳು ಬೇಕಾದಲ್ಲಿ Sandbazer ಆ್ಯಪ್ನಲ್ಲಿ ಬುಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆವಿ ತಿಳಿಸಿದ್ದಾರೆ.
ಸಾರ್ವಜನಿಕರಿಗೆ 20 ಕಿ.ಮಿ.ಒಳಗಡೆ 7 ಸಾವಿರ ರೂ.ನಲ್ಲಿ ಮರಳನ್ನ ಮನೆ ಬಾಗಿಲಿಗೆ ತಲುಪಿಸಲು ಆ್ಯಪ್ ಸಹಾಯಕವಾಗುವದು. ಕೆಲವು ಕಡೆ ಅಕ್ರಮವಾಗಿ ಮರಳು ಸಾಗಟ ಮಾಡುವುದು ಮತ್ತು ಆಕ್ರಮ ಮರಳುಗಾರಿಕೆಯಲ್ಲಿ ಅಧಿಕಾರಿಗಳು ಶಾಮಿಲು ಆಗಿರುವ ದೂರುಗಳು ಜಿಲ್ಲಾಡಳಿತಕ್ಕೆ ಬಂದಿವೆ.
ಅಕ್ರಮ ಮರಳುಗಾರಿಕೆಯಲ್ಲಿ ಅಧಿಕಾರಿಗಳು ಭಾಗಿಯಾಗಿದ್ದಲ್ಲಿ ಅಂತ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸು ದಾಖಲು ಮಾಡಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
- Advertisement -