Saturday, April 20, 2024
spot_imgspot_img
spot_imgspot_img

ಸಂಘನಿಕೇತನ ಗಣೇಶೋತ್ಸವ ಸಮಾಪನ

- Advertisement -G L Acharya panikkar
- Advertisement -

ಮಂಗಳೂರು : ನಗರದ ಕೇಶವ ಸ್ಮ್ರತಿ ಸಂವರ್ಧನ ಸಮಿತಿ ಸಂಘನಿಕೇತನ ಇದರ ಆಶ್ರಯದಲ್ಲಿ ನಡೆಯುವ 73 ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ ದ ಐದು ದಿನಗಳ ಪರ್ಯಂತ ಸಂಘನಿಕೇತನದಲ್ಲಿ ನಡೆದ ಗಣೇಶೋತ್ಸವ ಇಂದು ಸಮಾಪನಗೊಂಡಿತು.

ಕೊರೋನಾ ಮಹಾಮಾರಿಯ ತಡೆಗಟ್ಟುವ ಹಿನ್ನೆಲೆಯಲ್ಲಿ ಈ ಬಾರಿ ಅತೀ ಸರಳ ರೀತಿಯಲ್ಲಿ ಗಣೇಶೋತ್ಸವ ಆಚರಿಸಲ್ಪಟ್ಟಿತು .ಈ ಬಾರಿ ಶೋಭಾಯಾತ್ರೆ ಆಯೋಜಿಸಲಿಲ್ಲ ಶ್ರೀ ಮಹಾ ಗಣಪತಿ ದೇವರ ವಿಗ್ರಹವನ್ನು ಕಾರ್ಯಕರ್ತರು ಭುಜ ಸೇವೆಯ ಮುಖಾಂತರ ರಥಬೀದಿಯಲ್ಲಿರುವ ಮಹಾಮಾಯ ತೀರ್ಥದಲ್ಲಿ ಜಲ ಸ್ಥ0ಭನ ಗೊಳಿಸಲಾಯಿತು . ಬೆಳಿಗ್ಗೆ ಪೂಜೆ ಮಧ್ಯಾನಃ ಮಹಾ ಪೂಜೆ ಬಳಿಕ ವಿಸರ್ಜನಾ ಮಂಗಳಾರತಿ ನಡೆದ ನಂತರ ಶ್ರೀ ದೇವರ ವಿಗ್ರಹಕ್ಕೆ ವಿಶೇಷ ಹೂವಿನ ಅಲಂಕಾರ ಬಳಿಕ ವಿಸರ್ಜನೆ ವಂದೇ ಮಾತರಂ ತದನಂತರ ಜಲ ಸ್ಥoಭನ ಗೊಳಿಸಲಾಯಿತು .

- Advertisement -

Related news

error: Content is protected !!