- Advertisement -
- Advertisement -
ಕೊಲ್ಕತ್ತಾ: ಎದೆನೋವಿನಿಂದ ನಿನ್ನೆ ಕೊಲ್ಕತ್ತಾದ ವುಡ್ಲ್ಯಾಂಡ್ಸ್ ಆಸ್ಪತ್ರೆಗೆ ದಾಖಲಾಗಿರುವ ಕ್ರಿಕೆಟ್ ದಿಗ್ಗಜ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಇವತ್ತು ಮತ್ತೊಂದು ಸ್ಟಂಟ್ ಅಳವಡಿಸಲಾಗುತ್ತೆ.
ಕಳೆದ ಬಾರಿ ದಾದಾ ಆಸ್ಪತ್ರೆಗೆ ದಾಖಲಾಗಿದ್ದಾಗ ಸ್ಟಂಟ್ ಅಳವಡಿಸಲಾಗಿತ್ತು. ಆದ್ರೆ ಅವರು ಡಿಸ್ಚಾರ್ಜ್ ಆದ 20 ದಿನಗಳ ಬಳಿಕ ಮತ್ತೆ ಎದೆನೋವು ಕಾಣಿಸಿಕೊಂಡಿದೆ. ಹೀಗಾಗಿ ಇವತ್ತು ಡಾ. ಅಫ್ತಾಬ್ ಖಾನ್ ಗಂಗೂಲಿಗೆ ಇನ್ನೊಂದು ಸ್ಟಂಟ್ ಅಳವಡಿಸಲಿದ್ದಾರೆ.
ಖ್ಯಾತ ಹೃದ್ರೋಗ ತಜ್ಞರಾದ ಡಾ. ದೇವಿ ಶೆಟ್ಟಿ ಸಮ್ಮುಖದಲ್ಲಿ ಸ್ಟಂಟ್ ಅಳವಡಿಕೆ ನಡೆಯಲಿದ್ದು. ಡಾ. ಸಪ್ತರ್ಷಿ ಬಾಸು ಹಾಗೂ ಡಾ. ಸರೋಜ್ ಮಂಡಲ್ ಸಹ ಉಪಸ್ಥಿತರಿರಲಿದ್ದಾರೆ.
- Advertisement -