Saturday, June 28, 2025
spot_imgspot_img
spot_imgspot_img

ಕಾಸರಗೋಡು : ಕೃಷಿ ಸಹಕಾರಿ ಸಂಸ್ಥೆಯ ಕಾರ್ಯದರ್ಶಿ ಕೋಟ್ಯಾಂತರ ರೂ . ಸಾಲ ತೆಗೆದು ಪರಾರಿ

- Advertisement -
- Advertisement -
This image has an empty alt attribute; its file name is VC_PUC_-1-819x1024.jpg
This image has an empty alt attribute; its file name is shri-energy-solar-667x1024.jpeg

ಕಾಸರಗೋಡು : ಸುಮಾರು 4. 76 ಕೋಟಿ ರೂ . ಗಳ ಸಾಲ ತೆಗೆದು ಕೃಷಿ ಸಹಕಾರಿ ಸಂಸ್ಥೆಯ ಕಾರ್ಯದರ್ಶಿ ಪರಾರಿಯಾದ ಘಟನೆ ಕಾರಡ್ಕದಲ್ಲಿ ನಡೆದಿದೆ.

ಕಾರಡ್ಕ ಕೃಷಿ ಸಹಕಾರಿ ಸಂಸ್ಥೆಯ ಕಾರ್ಯದರ್ಶಿ ಕೆ .ರತೀಶ್ ವಿರುದ್ಧ ಆದೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸದಸ್ಯರ ಗಮನಕ್ಕೆ ತರದೆ ಸಾಲ ತೆಗೆದು ವಂಚಿಸಿದ್ದಾರೆ ಎಂದು ತಿಳಿದುಬಂದಿದೆ. ರತೀಶ್ ಸಂಸ್ಥೆಗೆ ಬಂದಿಲ್ಲ,ರಜೆ ಅರ್ಜಿ ಕೂಡ ನೀಡಿಲ್ಲ, ಸಂಪರ್ಕಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ . ಇದರಿಂದ ಸಂಶಯಗೊಂಡು ಸಹಾಯಕ ನೋಂದಣಾಧಿಕಾರಿಯವರಲ್ಲಿ ತಪಾಸಣೆ ನಡೆಸಲು ಸೂಚಚಿಸಿದ್ದು , ಈ ವೇಳೆ ಭಾರೀ ವಂಚನೆ ಬೆಳಕಿಗೆ ಬಂದಿದೆ. ಬ್ಯಾಂಕ್ ನಲ್ಲಿ ಹಲವಾರು ಮಂದಿಯ ಚಿನ್ನಾಭರಣವನ್ನು ಅಡವಿಟ್ಟ ಬಗ್ಗೆ ನಕಲಿ ದಾಖಲೆ ಸೃಷ್ಟಿಸಿ ಹಣವನ್ನು ವಂಚಿಸಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸೊಸೈಟಿ ಅಧ್ಯಕ್ಷ ಸೂಫಿ ನೀಡಿದ ದೂರಿನಂತೆ ಆದೂರು ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಲಾಗಿದೆ

- Advertisement -

Related news

error: Content is protected !!