- Advertisement -
- Advertisement -
ಶಬರಿಮಲೆ: ಮಲೆಯಾಳಂ ತಿಂಗಳು ತುಲಾಮಾಸದ ಪೂಜೆ ವೇಳೆ ಭಕ್ತರಿಗೆ ಅಯ್ಯಪ್ಪ ದರ್ಶನಕ್ಕೆ ಅವಕಾಶ ದೊರೆಯಲಿದೆ. ಇದರ ಅಂಗವಾಗಿ ವರ್ಚುವಲ್ ಬುಕ್ಕಿಂಗ್ ಇಂದು ಆರಂಭವಾಗಿದೆ.
ತುಲಾ ತಿಂಗಳ ಪೂಜೆಗಾಗಿ ಅಕ್ಟೋಬರ್ 16ರಂದು ಶಬರಿಮಲೆ ಬಾಗಿಲು ತೆರಯಲಿದೆ. ಆದರೆ ಭಕ್ತರ ದರ್ಶನಕ್ಕೆ ಅಕ್ಟೋಬರ್ 17ರಿಂದ ಮಾತ್ರ ಅವಕಾಶ ನೀಡಲಾಗಿದೆ. ಅಕ್ಟೋಬರ್ 21ರಂದು ಮತ್ತೆ ಶಬರಿಮಲೆ ಬಾಗಿಲು ಮುಚ್ಚಲಾಗುವುದು.
ಪ್ರತಿದಿನ 250 ಭಕ್ತರಿಗೆ ದೇವರ ದರ್ಶನಕ್ಕೆ ಅನುಮತಿ ದೊರೆಯಲಿದೆ. ವರ್ಚುವಲ್ ಕ್ಯೂ ಮೂಲಕ ಇದನ್ನು ಬುಕ್ ಮಾಡಬೇಕಾಗಿದೆ. ದರ್ಶನಕ್ಕೆ ಒಂದುವರೆ ಗಂಟೆ ಮೊದಲು ಅವರು ಪಂಪಾದಲ್ಲಿರಬೇಕು. ಪಂಪಾ ನದಿಯಲ್ಲಿ ಭಕ್ತರು ಸ್ನಾನ ಮಾಡುವುದನ್ನು ನಿಷೇಧಿಸಲಾಗಿದೆ.
ಇದಕ್ಕಾಗಿ ಶವರ್ ವ್ಯವಸ್ಥೆ ಮಾಡಲಾಗಿದೆ. ಮುಂಬರುವ ಮಂಡಲ ಮತ್ತು ಮಕರ ವಿಳಕ್ಕ್ ನ ಪೂರ್ವ ಭಾವಿಯಾಗಿ ಈ ವರ್ಚುವಲ್ ಸರದಿ ವ್ಯವಸ್ಥೆ ಜಾರಿ ಮಾಡಲಾಗಿದೆ.
- Advertisement -