- Advertisement -
- Advertisement -
ತಿರುವನಂತಪುರಂ(ನ6): ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವರ ಪ್ರಸಾದವನ್ನು ಇನ್ನು ಸ್ಪೀಡ್ ಪೋಸ್ಟ್ ಮೂಲಕ ಪಡೆಯಬಹುದಾಗಿದೆ.
ನ.16 ರಿಂದ ಶಬರಿಮಲೆ ಯಾತ್ರೆ ಪ್ರಾರಂಭಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ 450 ರೂ. ಗಳ ಅರಾವನ, ತುಪ್ಪ ಮತ್ತು ಇತರ ಪ್ರಸಾದಗಳನ್ನು ಒಳಗೊಂಡಿರುವ ಕಿಟ್ ಗಳನ್ನು ಕಾಯ್ದಿರಸಬಹುದಾಗಿದೆ.
ಬುಕಿಂಗ್ ಶುಕ್ರವಾರದಿಂದ (ನ.6) ಆರಂಭಗೊಳ್ಳಲಿದ್ದು ನ. 16ರಿಂದ ಪ್ರಸಾದಗಳನ್ನು ತಲುಪಿಸುವ ಕಾರ್ಯ ಆರಂಭಗೊಳ್ಳಲಿದೆ.
ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್ ಅವರು ನಿನ್ನೆ (ನ.5) ಈ ಹೊಸ ಸೌಲಭ್ಯವನ್ನು ಉದ್ಘಾಟಿಸಿದ್ದಾರೆ.
ಕೊರೋನಾ ಕಾರಣದಿಂದ ದೇವಾಲಯಕ್ಕೆ ಯಾತ್ರಿಕರ ಪ್ರವೇಶವನ್ನು ಈ ವರ್ಷದಿಂದ ಮಾತ್ರ ವರ್ಚುವಲ್ ಕ್ಯೂ ಬುಕಿಂಗ್ ಮೂಲಕ ನಿರ್ಬಂಧಿಸಲಾಗುವುದು ಮತ್ತು ವಾರದ ದಿನಗಳಲ್ಲಿ 1,000 ಯಾತ್ರಾರ್ಥಿಗಳಿಗೆ ಮಾತ್ರ ಅವಕಾಶ ನೀಡುವುದು ಎಂದಿದ್ದಾರೆ.
- Advertisement -