- Advertisement -
- Advertisement -
ಬೆಂಗಳೂರು: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಆಪ್ತೆ ಶಶಿಕಲಾ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ . ಚೆನ್ನೈಗೆ ತೆರಳದೆ ಬೆಂಗಳೂರಿನಲ್ಲೇ ವಾಸ್ತವ್ಯ ಹೊಂದಲು ನಿರ್ಧರಿಸಿದ್ದಾರೆ.
ಫೆಬ್ರವರಿ 3ರ ತನಕ ಬೆಂಗಳೂರಿನಲ್ಲಿಯೇ ಅವರು ವಾಸ್ತವ್ಯ ಹೂಡಲಿದ್ದಾರೆ. ತವರು ರಾಜ್ಯಕ್ಕೆ ಯಾವಾಗ ಪ್ರವೇಶ ಮಾಡಿದರೆ ಒಳಿತಾಗಲಿದೆ ಎಂಬ ಬಗ್ಗೆ ಅವರು ಜ್ಯೋತಿಷಿಗಳ ಸಲಹೆ ಕೇಳಿದ್ದಾರೆ.
ಸದ್ಯ ಪುಷ್ಯ ಮಾಸ ನಡೆಯುತ್ತಿದೆ. ಫೆಬ್ರವರಿ 11 ರ ಬಳಿಕ ಮೇಘ ಮಾಸ ಆರಂಭವಾಗುತ್ತದೆ ಅಮವ್ಯಾಸೆಯಂದು ತಮಿಳುನಾಡು ಪ್ರವೇಶಿಸಿದರೆ ರಾಜಕೀಯ ಭವಿಷ್ಯ ಉಜ್ವಲವಾಗಲಿದೆ ಎಂದು ಜ್ಯೋತಿಷಿಗಳು ಸಲಹೆ ನೀಡಿದ್ದಾರೆ ಎಂದು ವರದಿಯಾಗಿದೆ.
- Advertisement -