ಶಿವಮೊಗ್ಗ, ಅಕ್ಟೋಬರ್ 29: ಪೊಲೀಸರು ಆರು ಜನ ದರೋಡೆಕೋರರ ಗ್ಯಾಂಗ್ ಅನ್ನು ಬಂಧಿಸಿ 9,31,050 ರೂ.ಗಳ ಮೌಲ್ಯದ 213.5 ಗ್ರಾಂ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಗ್ಯಾಂಗ್ನ ಸದಸ್ಯನೊಬ್ಬ ಚೈನ್ ಕದಿಯಲು ವಿಮಾನದ ಮೂಲಕ ಬರುತ್ತಿದ್ದ ಎಂಬ ವಿಚಾರವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ಎಂ ಶಾಂತರಾಜು ಬಹಿರಂಗಪಡಿಸಿದ್ದಾರೆ.
ಅಕ್ಟೋಬರ್ 28 ರ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚೈನ್ ಕಳ್ಳತನ ಮತ್ತು ದರೋಡೆ ಯತ್ನಗಳಲ್ಲಿ ಭಾಗಿಯಾಗಿರುವ ಗ್ಯಾಂಗ್ ಅನ್ನು ಬಂಧಿಸಲಾಗಿದೆ.
ಬಂಧಿತರನ್ನು ಉತ್ತರ ಪ್ರದೇಶದ ಫೈಸಲ್ (25), ಸಲ್ಮಾನ್ (24), ಆಶಿಶ್ ಕುಮಾರ್ (36), ಮೆಹ್ತಾಬ್ (35), ಸಲ್ಮಾನ್ (22) ಮತ್ತು ಇಲ್ಲಿ ಜೋಸೆಫ್ ನಗರದಲ್ಲಿ ವಾಸಿಸುವ ಮೀರತ್ ಮೂಲದ ಮೊಹಮ್ಮದ್ ಚಂದ್ ಎಂದು ಗುರುತಿಸಲಾಗಿದೆ.
“ವಿಚಾರಣೆಯ ಸಮಯದಲ್ಲಿ, ನಗರದಲ್ಲಿ ವಾಸಿಸುವ ಮೊಹಮ್ಮದ್ ಚಂದ್ ಗ್ಯಾಂಗ್ನ ಕಳ್ಳತನ ಮತ್ತು ದರೋಡೆಗಳಿಗೆ ಸಹಾಯ ಮಾಡುತ್ತಿದ್ದ ವಿಚಾರ ಬಹಿರಂಗಗೊಂಡಿದೆ. ಬಂಧಿತ ಜನರಲ್ಲಿ ಒಬ್ಬ ಉತ್ತರ ಪ್ರದೇಶದಿಂದ ಬೆಂಗಳೂರಿಗೆ ವಿಮಾನದಲ್ಲಿ ಬಂದು ತಲುಪಿ, ಅಲ್ಲಿಂದ ಮೋಟಾರ್ ಬೈಕ್ ಮೂಲಕ ಕೃತ್ಯ ಎಸಗುತ್ತಿದ್ದ ಎನ್ನುವ ವಿಚಾರ ತನಿಖೆಯಲ್ಲಿ ತಿಳಿದು ಬಂದಿದೆ.
ಸೆಪ್ಟೆಂಬರ್ 16 ರಂದು ಇಲ್ಲಿನ ವಿದ್ಯಾನಗರ ಮತ್ತೂರು ರಸ್ತೆಯಲ್ಲಿ ಸುಪ್ತವಾಗಿದ್ದ ಆರು ಸದಸ್ಯರ ಸಶಸ್ತ್ರ ಸಹಿತ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಅವರಿಂದ ದ್ವಿಚಕ್ರ ವಾಹನ, ಎರಡು ಪಿಸ್ತೂಲ್ಗಳು, 12 ಜೀವಂತ ಗುಂಡುಗಳು ಮತ್ತು ಇತರ ಮಾರಕ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.