


ಪೆರುವಾಯಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಆ. 26 ನೇ ಸೋಮವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯು ವೈದಿಕ ವಿಧಿ ವಿಧಾನದೊಂದಿಗೆ ಭಜನೆ,ಆಟೋಟ ಸ್ಪರ್ಧೆಗಳು,ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರುಗಿತು.
ಬೆಳಿಗ್ಗೆ ಭಜನಾ ಸೇವೆ ಪ್ರಾರಂಭಗೊಂಡು. ಪುಟಾಣಿ ಮಕ್ಕಳ ಶ್ರೀ ಕೃಷ್ಣ ವೇಷಗಳ ಮೆರವಣಿಗೆಯು ಶ್ರೀ ರಾಜರಾಜೇಶ್ವರಿ ಭಜನಾ ಮಂದಿರದಿಂದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ತನಕ ಸಾಗಿ ಬಂತು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಆಡಳಿತ ಮೊಕ್ತೇಸರ ವರ್ಗದ ಶ್ರೀಮತಿ ಸವಿತಾ ಭಟ್ ಅಡ್ವಾಯಿ ರವರು ಪ್ರಸ್ತಾವಿಕ ಭಾಷಣ ಮಾಡಿದರು. ವೇದಮೂರ್ತಿ ಶ್ರೀ ಅನಂತ ನಾರಾಯಣ ಭಟ್ ಪರಕ್ಕಜೆ ಧಾರ್ಮಿಕ ಉಪನ್ಯಾಸ ನೀಡಿದರು. ನಿಕಟ ಪೂರ್ವ ಪಂಚಾಯತ್ ಅಧ್ಯಕ್ಷರು ಹಾಗೂ ಮಾಣಿಲ ಗ್ರಾಮ ಪಂಚಾಯತ್ ಸದಸ್ಯರು ರಾಜೇಶ್ ಕುಮಾರ್ ಬಾಳೆಕಲ್ಲು ರವರು ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.ಆಡಳಿತ ಮೊಕ್ತೇಸರರಾದ ವೆಂಕಪ್ಪ ಮಾರ್ಲರವರು ಉಪಸ್ಥಿತರಿದ್ದರು.

ಯಶಿಕ ಪಿ ಶೆಟ್ಟಿ ಕೆಳಗಿನಮನೆ ಪ್ರಾರ್ಥನೆ ಮಾಡಿದರು.ಸೇವಾ ಸಮಿತಿಯ ಪ್ರಮುಖರಾದ ಪ್ರಭಾಕರ ಶೆಟ್ಟಿ ಕಲಾಯ್ತಿಮಾರು ಸ್ವಾಗತಿಸಿ. ದಿನೇಶ್ ಕುಲಾಲ್ ಮುಚ್ಚಿರಬೆಟ್ಟು ವಂದಿಸಿದರು. ನಾಗೇಶ್ ಮಾಸ್ತರ್ ಕೊಲ್ಲತ್ತಡ್ಕ ಕಾರ್ಯಕ್ರಮ ನಿರೂಪಿಸಿದರು.
ವೈದಿಕ ವಿಧಿ ವಿಧಾನವನ್ನು ದೇವಸ್ಥಾನದ ಅರ್ಚಕರಾದ ಶ್ರೀ ಶಂಕರ ನಾರಾಯಣ ಮೂರ್ತಿ ಭಟ್ ಹಾಗೂ ಮೊಕ್ತೇಸರರಾದ ಸಚಿನ್ ಭಟ್ ಅಡ್ವಾಯಿ ರವರು ನೆರವೇರಿಸಿದರು.
ಸಂಜೆ ಶ್ರೀ ರವಿದಾಸ ಪೆರ್ಲರವರಿಂದ ಪೌರಾಣಿಕ ಕಥಾ ಭಾಗವಾದ ಪಾದುಕ ಪಟ್ಟಾಭಿಷೇಕ ಎಂಬ ಹರಿಕಥೆ ಕಾರ್ಯಕ್ರಮ ನಡೆಯಿತು.
ಆಟೋಟ ಸ್ಪರ್ಧೆ ವಿಜೇತರಿಗೆ ಬಹುಮಾನವನ್ನು ನೀಡಲಾಯಿತು. ಊರ ಹಾಗೂ ಪರವೂರಿನ ಭಕ್ತಾಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.