Friday, September 4, 2026
spot_imgspot_img
spot_imgspot_img

ಕೊಪ್ಪಳ; ಸ್ಪಿರಿಟ್‌ ಕುಡಿದು ಇಬ್ಬರು ಯುವಕರು ಮೃತ್ಯು

- Advertisement -
- Advertisement -

ಕೊಪ್ಪಳ: ಸ್ಪಿರಿಟ್‌ ಕುಡಿದು ಇಬ್ಬರು ಯುವಕರು ಮೃತಪಟ್ಟ ಘಟನೆ ಕೊಪ್ಪಳ ತಾಲೂಕಿನ ಕೂಕನಪಳ್ಳಿ ಗ್ರಾಮದಲ್ಲಿ ನಡೆದಿದೆ.

ಕೂಕನಪಳ್ಳಿಯ ರಮೇಶ ಹೊಸಳ್ಳಿ, ಅಮರಯ್ಯ ಹಿರೇಮಠ ಮೃತರು. ಫೆ.4ರಂದು ಜಮೀನಿನಲ್ಲಿ ಪಾರ್ಟಿ ಮಾಡಲು ಹೋಗಿದ್ದಾಗ ಈ ಘಟನೆ ನಡೆದಿದೆ.

ಸಾರಾಯಿ ಎಂದು ಸ್ಪಿರಿಟ್ ಕುಡಿದ ರಮೇಶ್, ಶರಣಪ್ಪ ಹಂಚಿನಾಳ ಮತ್ತು ಆಮರಯ್ಯ ಹಿರೇಮಠ ಅವರ ಅರೋಗ್ಯದಲ್ಲಿ ಏರು ಪೇರು ಆಗಿದ್ದು ಇವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ರಮೇಶ್ ಚಿಕಿತ್ಸೆ ಫಲಿಸದೆ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಹುಬ್ಬಳ್ಳಿಯಲ್ಲಿ ಅಮರಯ್ಯ ಹಿರೇಮಠ ಮೃತಪಟ್ಟಿದ್ದಾನೆ.

ಮೃತ ರಮೇಶ್ ಅವರ ತಂದೆ ನೀಡಿದ ದೂರಿನ ಆಧಾರದ ಮೇಲೆ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!