Friday, April 19, 2024
spot_imgspot_img
spot_imgspot_img

ಮನೆಯ ಆಸ್ತಿ-ಪಾಸ್ತಿ ಸೇರಿ 3 ಕೋಟಿ ರೂ. ನಷ್ಟ: ಅಖಂಡ ಶ್ರೀನಿವಾಸ್ ಮೂರ್ತಿ

- Advertisement -G L Acharya panikkar
- Advertisement -

ವರದಿ: ನ್ಯೂಸ್ ಡೆಸ್ಕ್, ವಿ ಟಿವಿ

ಬೆಂಗಳೂರು: ಗಲಭೆಕೋರರಿಂದಾಗಿ ನಮ್ಮ ಮನೆಯ ಆಸ್ತಿ-ಪಾಸ್ತಿ ಸೇರಿ ಸುಮಾರು 3 ಕೋಟಿ ರೂ.ನಷ್ಟವಾಗಿದೆ ಎಂದು ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಹೇಳಿದ್ದಾರೆ.

ಮಂಗಳವಾರ ರಾತ್ರಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಇಂದು ಡಿ.ಜೆ.ಹಳ್ಳಿ ಪೊಲೀಸ್ ಠಾಣೆಗೆ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಭೇಟಿ ನೀಡಿದರು. ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು, ದುಷ್ಕರ್ಮಿಗಳ ದಾಳಿಯಿಂದಾಗಿ ಅಪಾರ ನಷ್ಟ ಉಂಟಾಗಿದೆ. ಹೀಗಾಗಿ ನನಗೆ ನ್ಯಾಯ ದೊರಕಿಸುಕೊಡುವಂತೆ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದ್ದೇನೆ. ಮನೆಗೆ ನುಗ್ಗಿದ್ದ ದುಷ್ಕರ್ಮಿಗಳು ಏನೆಲ್ಲ ಹಾನಿ ಮಾಡಿದ್ದಾರೆ ಅನ್ನೋದರ ಬಗ್ಗೆ ಪೊಲೀಸರಿಗೆ ಲಿಸ್ಟ್ ಕೊಟ್ಟಿದ್ದೇನೆ. ಇದೆಲ್ಲವೂ ಗಲಭೆಕೋರರಿಂದ ತುಂಬಿ ಕೊಡಲು ಸಾಧ್ಯವಾಗತ್ತಾ ಎಂದು ಪ್ರಶ್ನಿಸಿದ್ರು.

ಮನೆಯಲ್ಲಿ ನನ್ನ ಮಕ್ಕಳು, ಕುಟುಂಬಸ್ಥರು ಇದ್ದಿದ್ದರೆ ಏನು ಗತಿ..? ಕಷ್ಟಪಟ್ಟು ದುಡಿದು ಕಟ್ಟಿರುವ ಮನೆ. ಅದರಲ್ಲಿ ನೆನಪಿನ ಸರಮಾಲೆಗಳಿವೆ ಇತ್ತು ಎಂದು ಬೇಸರ ವ್ಯಕ್ತಪಡಿಸಿದರು.

- Advertisement -

Related news

error: Content is protected !!