- Advertisement -
- Advertisement -
ಮಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಏಳನೇ ತರಗತಿ ಬಾಲಕ ಮೃತಪಟ್ಟ ಘಟನೆ ದೇರಳಕಟ್ಟೆಯ ಬೆಳ್ಮ ವ್ಯಾಪ್ತಿಯ ಪಂಜಳ ಎಂಬಲ್ಲಿ ನಡೆದಿದೆ.
ಬೆಳ್ಮ ಗ್ರಾಮ ಪಂಚಾಯತ್ ಪಂಜಳ ನಿವಾಸಿ ಅಬ್ಬಾಸ್ ಎಂಬವರ ಪುತ್ರ ಎಚ್.ಮುಹಮ್ಮದ್ ಶಹದ್(12) ಅಲ್ಪಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ದೇರಳಕಟ್ಟೆ ಶಾಲೆಯ ಏಳನೇ ತರಗತಿ ವಿದ್ಯಾರ್ಥಿಯಾಗಿದ್ದ ಈತ ಅಂಗವಿಕಲನಾಗಿದ್ದ. ವೀಲ್ ಚೇರ್ ಮೂಲಕ ಶಾಲೆಗೆ ಹಾಜರಾಗಿ ಶಿಕ್ಷಣ ಪಡೆಯುತ್ತಿದ್ದ ಶಹದ್ ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೀಡಾಗಿದ್ದ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದ ಶಹದ್ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾನೆ.
- Advertisement -