






ಶ್ರೀ ಸಿದ್ಧಿವಿನಾಯಕ ಯುವಕ ಮಂಡಲ(ರಿ.) ಧರ್ಮನಗರ – ಕಂಬಳಬೆಟ್ಟು ಇದರ ವತಿಯಿಂದ ರೋಟರಿ ಕ್ಯಾಂಪ್ಲೋ ಬ್ಲಡ್ಸೆಂಟರ್ ಪುತ್ತೂರು ರೋಟರಿ ಕ್ಲಬ್ ಪುತ್ತೂರು ಕಣ್ಣಿನ ಆಸ್ಪತ್ರೆ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮಂಗಳೂರು ನೇತ್ರಜ್ಯೋತಿ ಚ್ಯಾರಿಟೇಬಲ್ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಅಂಧತ್ವ ನಿವಾರಣೆ ವಿಭಾಗ) ಮಂಗಳೂರು. ಡಾ| ಪಿ. ದಯಾನಂದ ಪೈ ಮತ್ತು ಸತೀಶ್ ಪೈ ಚ್ಯಾರಿಟೇಬಲ್ ಟ್ರಸ್ಟ್ (ರಿ.) ಸೆಂಚುರಿ ಗ್ರೂಪ್ ಬೆಂಗಳೂರು ಇವರ ಜಂಟಿ ಆಶ್ರಯದಲ್ಲಿ ಹಿಂದೂ ಹೋರಾಟಗಾರ ಸುಹಾಸ್ ಶೆಟ್ಟಿ ಬಜ್ಪೆ ಇವರ ಸ್ಮರಣಾರ್ಥ ಸ್ವಯಂಪ್ರೇರಿತ ರಕ್ತದಾನ ಶಿಬಿರ ಹಾಗೂ ಉಚಿತ ನೇತ್ರ ತಪಾಸಣೆ ಮತ್ತು ಚಿಕಿತ್ಸೆಯು ಇದೇ ಬರುವ ದಿನಾಂಕ 01-06-2025ನೇ ಆದಿತ್ಯವಾರದಂದು ಶ್ರೀ ದುರ್ಗಾಸಮಾಜ ಮಂದಿರ-ಧರ್ಮನಗರ, ಕಂಬಳಬೆಟ್ಟು, ಇಲ್ಲಿ ಬೆಳಿಗ್ಗೆ ಗಂಟೆ 8.30 ರಿಂದ ಮಧ್ಯಾಹ್ನ 1:00ರ ತನಕ ನಡೆಯಲಿದೆ.

ಶಿಬಿರದ ವಿಶೇಷತೆ :
•ರಕ್ತದಾನ ಶಿಬಿರದಲ್ಲಿ ಪುರುಷರು, ಮಹಿಳೆಯರು ರಕ್ತದಾನ ಮಾಡಲು ಅವಕಾಶವಿರುತ್ತದೆ.
•ಕಣ್ಣಿನ ತಪಾಸಣೆ ಸಂಪೂರ್ಣ ಉಚಿತ, ಅಗತ್ಯವುಳ್ಳವರಿಗೆ ಕಣ್ಣಿನ ಪೊರೆಯ ಉಚಿತ ಶಸ್ತ್ರ ಚಿಕಿತ್ಸೆ.
•ಮಧುಮೇಹ ಮತ್ತು ರಕ್ತದೊತ್ತಡ (ಡಯಾಬಿಟೀಸ್ & ಬಿ.ಪಿ. ತಪಾಸಣೆ ಮಾಡಲಾಗುವುದು.)
•ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಆಯ್ಕೆಯಾದವರಿಗೆ ಗೊತ್ತುಪಡಿಸಿದ ದಿನಾಂಕದಂದು ರೋಟರಿಕ್ಲಬ್ ಪುತ್ತೂರು ಕಣ್ಣಿನ ಆಸ್ಪತ್ರೆ ಅಥವಾ ಮಂಗಳೂರು ಪ್ರಸಾದ್ ನೇತ್ರಾಲಯ ಕಣ್ಣಿನ ಆಸ್ಪತ್ರೆಗೆ ವಾಹನದಲ್ಲಿ ಕರೆದುಕೊಂಡುಹೋಗಿ ಉಚಿತ ಶಸ್ತ್ರಚಿಕಿತ್ಸೆ ಮಾಡಿಸಿ, ವಾಪಾಸು ತಂದುಬಿಡಲಾಗುವುದು.
•ತಮ್ಮ ಕಣ್ಣಿನ ಹಾಗೂ ಇತರ ಆರೋಗ್ಯ ಸಮಸ್ಯೆಗಳನ್ನು ತಪಾಸಣಾ ಸಮಯದಲ್ಲಿ ವೈದ್ಯರಿಗೆ ತಪ್ಪದೇ ತಿಳಿಸತಕ್ಕದ್ದು.
ಸಂಪರ್ಕಿಸಿ: 7090615880, 9686892464