Monday, June 30, 2025
spot_imgspot_img
spot_imgspot_img

ಮಾನಸಿಕವಾಗಿ ಮನನೊಂದು ನೇಣುಬಿಗಿದು ವ್ಯಕ್ತಿ ಆತ್ಮಹತ್ಯೆ: ವಿಟ್ಲದ ಕರೋಪಾಡಿ ಗ್ರಾಮದಲ್ಲಿ ನಡೆದ ಘಟನೆ

- Advertisement -
- Advertisement -

ವಿಟ್ಲ: ವ್ಯಕ್ತಿಯೊಬ್ಬ ಮಾನಸಿಕವಾಗಿ ಮನನೊಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕರೋಪಾಡಿ ಗ್ರಾಮದ ಕುರೋಮೂಲೆ ಎಂಬಲ್ಲಿ ನಡೆದಿದೆ.

ಕರೋಪಾಡಿ ಗ್ರಾಮದ ಕುರೋಮೂಲೆ ನಿವಾಸಿ ರಾಮನಾಯ್ಕ ಅವರ ಪುತ್ರ ಸತೀಶ್(39) ಮೃತಪಟ್ಟ ದುರ್ದೈವಿ.

ಸತೀಶ್ ಅವರು ಒಂದು ವರ್ಷದಿಂದ ವಿಪರೀತ ಕುಡಿತದ ಚಟವನ್ನು ಹೊಂದಿದ್ದು ಕುಡಿತದ ಚಟ ಜಾಸ್ತಿಯಾಗಿ ಮಾನಸಿಕವಾಗಿ ನೊಂದು ಈ ಹಿಂದೆ 3 ಬಾರಿ ನೇಣು ಬಿಗಿದು ಅತ್ಮಹತ್ಯೆಗೆ ಪ್ರಯತ್ನಸಿದ್ದರು.

ಸತೀಶ್ ನ ಪತ್ನಿ ಕೂಲಿ ಕೆಲಸಕ್ಕೆ ಹೋಗಿದ್ದು, ಸತೀಶ್ ಅವರು ತನ್ನ ಸಂಬಂಧಿಕರ ಅಡ್ಯನಡ್ಕದಲ್ಲಿರುವ ಮನೆಗೆ ತಿಥಿ ಕಾರ್ಯಕ್ರಮಕ್ಕೆ ತನ್ನ ತಂದೆಯನ್ನು ಆಟೋ ರಿಕ್ಷಾದಲ್ಲಿ ಬಿಟ್ಟು ತನ್ನ ಮನೆಗೆ ಬಂದಿದ್ದರು. ಸತೀಶ್ ಅವರ ತಂದೆ ಕಾರ್ಯಕ್ರಮ ಮುಗಿಸಿ ಮನೆಗೆ ಬಂದು ನೋಡಿದಾಗ ಗೇರು ಮರದಲ್ಲಿ ನೇಣು ಹಾಕಿದ ಸ್ಥಿತಿಯಲ್ಲಿ ಸತೀಶನ ಮೃತದೇಹ ಪತ್ತೆಯಾಗಿದೆ. ಮಾನಸಿಕವಾಗಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!