- Advertisement -
- Advertisement -
ಸೌಜನ್ಯ ಹತ್ಯೆ ಪ್ರಕರಣವನ್ನು ಮರು ತನಿಖೆ ನಡೆಸಬೇಕೆಂದು ಒತ್ತಾಯಿಸಿ ಪ್ರಬಲ ಹಿಂದೂ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ದಿ.ಸೌಜನ್ಯಳ ತಾಯಿ ಕುಸುಮಾವತಿ ನೇತೃತ್ವದಲ್ಲಿ ನಿನ್ನೆ ಸುಳ್ಯದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಿತು.
ಈ ಸಂದರ್ಭದಲ್ಲಿ ತಮ್ಮ ಮಗಳ ಮೇಲೆ ನಡೆದಿರುವ ಅತ್ಯಾಚಾರ ಮತ್ತು ಕೊಲೆಯ ಕ್ಷಣಗಳನ್ನು ನೆನೆದು ಭಾವುಕರಾದ ಸೌಜನ್ಯ ತಾಯಿ, ಕುಸುಮಾವತಿ ಮಾತನಾಡಿ ‘ನನ್ನ ಮಗಳ ಪ್ರಾಣ ಹೋಗುವ ಸಂದರ್ಭ ಆ ಮಗು ಅಮ್ಮಾ.. ಅಮ್ಮಾ.. ಎಂದು ಎಷ್ಟು ಬಾರಿ ಕೂಗಿರಬಹುದು.. ಅವಳ ಪ್ರಾಣ ಹೋಗುವ ಸಂದರ್ಭದಲ್ಲಿ ಎಷ್ಟು ನೋವನ್ನು ಅನುಭವಿಸಿರಬಹು.. ನನ್ನ ಮಗಳನ್ನು ಕೊಂದವರಿಗೆ ಅವಳನ್ನು ತಿನ್ನಬಹುದಿತ್ತಲ್ಲವೇ..? ಯಾಕೆ ಅವಳನ್ನು ಅಲ್ಲಿ ಅರ್ಧ ಬಿಟ್ಟು ಹೋಗಿದ್ದಾರೆ..? ಎಂದು ಕಣ್ಣೀರಿಡುತ್ತಾ ತನ್ನ ಮಗಳನ್ನು ನೆನೆದು ನ್ಯಾಯದ ಭಿಕ್ಷೆ ಬೇಡಿದರು.
- Advertisement -