- Advertisement -
- Advertisement -






ಸುಳ್ಯ: ಕೆಎಸ್ಆರ್ಟಿಸಿ ಬಸ್ನಿಲ್ದಾಣದಲ್ಲಿ ಮಲಗಿದ್ದ ಪ್ರಯಾಣಿಕರೊರ್ವರ ಅಮೂಲ್ಯ ವಸ್ತುಗಳಿರುವ ಬ್ಯಾಗ್ ಮತ್ತು ಶೂ ಕಳ್ಳತನ ಮಾಡಿದ ಘಟನೆ ಸುಳ್ಯದಲ್ಲಿ ನಡೆದಿದೆ. ಕದಿಯುತ್ತಿರುವ ದೃಶ್ಯ ಸಿ.ಸಿ ಕೆಮಾರದಲ್ಲಿ ಸೆರೆಯಾಗಿದೆ.
ಪ್ರಯಾಣಿಕರೊಬ್ಬರು ಬಸ್ ನಿಲ್ದಾಣದಲ್ಲಿ ಬಸ್ಗಾಗಿ ಕಾಯುತ್ತ ಮಲಗಿದ್ದರು. ಪ್ರಯಾಣಿಕ ನಿದ್ದಗೆ ಜಾರುತ್ತಿದ್ದಂತೆ ಕಳ್ಳ ಶೂ ಮತ್ತು ಬ್ಯಾಗನ್ನು ಕದ್ದು ಅಲ್ಲಿಂದ ಪರಾರಿಯಾಗಿದ್ದಾನೆ.
ಬಸ್ ನಿಲ್ಧಾಣದಲ್ಲಿ ರಾತ್ರಿ ಪಾಳಿಯಲ್ಲಿ ವಾಚ್ ಮ್ಯಾನ್ ಇಲ್ಲದಿರುವುದೇ ಸರಣಿ ಕಳ್ಳತನಗಳು ಕಾರಣವಾಗಿದೆ ಎಂದು ಪ್ರಯಾಣಿಕರು ದೂರಿಕೊಂಡಿದ್ದಾರೆ. ಬಸ್ ನಿಲ್ಧಾಣದ ಅಂಗಡಿ ಮಾಲಕರು ರಾತ್ರಿ ಪಾಳಿಗೆ ವಾಚ್ ಮ್ಯಾನ್ ನೇಮಕ ಮಾಡಬೇಕೆಂದು ಸುಳ್ಯದ ಬಸ್ ಡಿಪೋ ಮ್ಯಾನೇಜರ್ಗೆ ಮನವಿ ಮಾಡಿಕೊಂಡರು ವಾಚ್ ಮ್ಯಾನ್ ನೇಮಕ ಮಾಡಿಲ್ಲ ಎಂದು ದೂರಲಾಗಿದೆ.
- Advertisement -